ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಮಾಯಕ ನೈಜ ಕಥೆ ( ಸಂಚಿಕೆ-೧೨)

ಮಗನನ್ನು ಕಳೆದುಕೊಂಡ ದುಃಖ್ಖ ಮತ್ತು ಅವನ  ಆ ಕ್ರೂರ ಸಾವಿಗೆ ಕಾರಣ ಅದವರ ಮೇಲಿನ ಕೋಪ ಇವೆರಡು ಸದಾ ಕಾಲ ಅವರ ಮನಸ್ಸನ್ನು ಕೊರೆಯುತಿತ್ತು.         ಹೀಗೆ ವರುಷಗಳು ಉರುಳುತಿದ್ದವು. ಮರುದೇವಿಯವರು ದೊಡ್ಡ ಮಗಳು ಸರಸ್ವತಿಯನ್ನು ಅಟ್ಲೊಟ್ಟು ಮನೆತನದ ಅನಂತಯ್ಯ ಹೆಗ್ಡೆಯವರಿಗೆ  ವಿವಾಹ ಮಾಡಿ ಕೊಟ್ಟರು. ಮರುವರ್ಷವೇ ಸಣ್ಣ ಮಗಳು ಸುನಂದಳನ್ನು ಆಕೆಯ ಹದಿನಾರನೇ ವಯಸ್ಸಿನಲ್ಲಿ ಬಂಗಾಡಿ ಎಂಬಲ್ಲಿಯ ಮೆಚ್ಚಿಲಗುತ್ತು ಮನೆಯ ದೊಡ್ಡ ಜಮೀನುದಾರ ನಾಗರಾಜ ಆರಿಗರಿಗೆ ವಿವಾಹ ಮಾಡಿಕೊಟ್ಟರು.  ನಾಗರಾಜ ಆರಿಗರಿಗೆ ಮೂರನೇ ಮದುವೆ ಮೊದಲೆರಡು ಹೆಂಡತಿಯರು ಮದುವೆಯಾಗಿ ಒಂದೇ ವರ್ಷದಲ್ಲಿ ಗರ್ಭಿಣಿಯರಾಗಿ ಪ್ರಸವ ಸಮಯದಲ್ಲಿ ತೀರಿಕೊಂಡಿದ್ದರು. ಮರುದೇವಿಯವರು, ದೇವರಾಜರ ಒತ್ತಾಯದ ಮೆರೆಗೆ ಈ ಮದುವೆಗೆ ಒಪ್ಪಿಕೊಂಡಿದ್ದರು.         ಕೇವಲ ಆಸ್ತಿ ಇದೆ ಎಂದು ಸುಂದರಿಯಾದ, ಹದಿನಾರರ ಹರೆಯದ, ಹುಡುಗಿಯನ್ನು ಮೂರನೇ ಮದುವೆ ಆಗುವ ವರನಿಗೆ ಕೊಡುತ್ತಿದ್ದಾರೆ ಎಂದು ಅವತ್ತು ಊರವರು ಮಾತನಾಡಿ ಕೊಳ್ಳುತ್ತಿದ್ದರಂತೆ. ಮದುವೆಯ ದಿನ ನೆರೆಯ ಮಹಿಳೆಯೊಬ್ಬಳು ಮಧು ಮಗಳನ್ನು ನೋಡಲು ಬಂದವಳು. " ಜೈನರು ಆಸ್ತಿಯೊಂದು ಇದ್ದರೆ, ಹುಲಿಗೂ ಹೆಣ್ಣು ಕೊಡುತ್ತಾರೆ" ಎಂದಿದ್ದಳಂತೆ. ಮುಂದೆ ಒಬ್ಬಂಟಿಯಾದ ಮರುದೇವಿಯವರು, ಅಳಿಯ ನಾಗರಾಜ ಅರಿಗರ ಒತ್ತಾಯಕ್ಕೆ ಮಣಿದು.  ಮಗಳ ಮನೆಯಾದ ಬಂಗಾಡಿಯ ಮೆಚ್ಚಿಲದಲ್ಲಿ...

ಅಮಾಯಕ ನೈಜ ಕಥೆ ( ಸಂಚಿಕೆ-೧೧)

 ತನ್ನ ಪ್ರೀತಿಯ ಪುತ್ರ. ತನ್ನ ಕರುಳ ಕುಡಿ, ನಮ್ಮ ಕುಟುಂಬದ ವಾರಸುದಾರನಾಗಬೇಕಿದ್ದವನ ಕ್ರೂರ ಸಾವಿನ ಕಠೋರ ಸತ್ಯವನ್ನು ಅರಗಿಸಿಕೊಳ್ಳಲು ಮರುದೇವಿಯವರಿಗೆ ಸಾಧ್ಯವಾಗುತ್ತಿಲ್ಲ. ತನ್ನ ಕಂದನ ಸಾವಿಗೆ ಕಾರಣರಾದವರು ಎಷ್ಟೇ ದೊಡ್ಡ ವ್ಯಕ್ತಿಗಳಾದರು ಅವರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ನಿರ್ಧರಿಸಿದರು. ಈ ಸಾವಿನ ಬಗ್ಗೆ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಸೂಚಿಸಬೇಕು ಎಂದು ಜಿಲ್ಲಾ ಮ್ಯಾಜಿಸ್ಟೇಟರ್ ಅವರಿಗೆ ಒಂದು ಸುದೀರ್ಘವಾದ ದೂರು ಪತ್ರ ಬರೆದು ರೆಡಿ ಮಾಡಿದರು. ನಾಳೆಯ ದಿನ ಮಂಗಳೂರಿಗೆ ಮ್ಯಾಜಿಸ್ಟೇಟರ್ ಕಛೇರಿಗೆ ಹೋಗಿ ಅವರನ್ನು ಮುಖತಃ ಭೇಟಿಯಾಗಿ, ಲಿಖಿತವಾಗಿ ಬರೆದ ದೂರನ್ನು ಕೊಡಬೇಕು ಎಂದು ನಿರ್ಧರಿಸಿದರು. ಮರುದಿನ ತಾನೊಬ್ಬಳೇ ಹೋಗುವ ಬದಲು ತನ್ನ ಅಕ್ಕನ ಮಗ ದೇವರಾಜ ಬಂಗನನ್ನು ಜೊತೆಗೆ ಕರೆದುಕೊಂಡು ಹೋದರೆ ಅನುಕೂಲ ಆಗುತ್ತದೆ ಎಂದು ಕೊಂಡರು.  ಮರುದೇವಿಯವರು ಮನೆಯಿಂದ ಹೊರಟು ಹೊಸ್ತಿಲು ದಾಟಿದ ಕೂಡಲೇ, ಆಕಸ್ಮಿಕ ಎಂಬಂತೆ ದೇವರಾಜ ಬಂಗನೇ ಎದುರುಗಡೆ ಬರುತ್ತಿದ್ದಾನೆ. ಮತ್ತೆ ಮನೆಗೆ ಬಂದು, ದೇವರಾಜನಿಗೆ ಕಾಫಿ ಕೊಟ್ಟು ಉಪಚರಿಸಿದರು  ಮರುದೇವಿಯವರು , ತಾನು ಹೊರಟ ವಿಷಯವನ್ನು ತಿಳಿಸಿ. "ನಿನ್ನನ್ನೇ ಹುಡುಕುತ್ತಾ ಹೊರಟೆ, ನೀನೆ ಎದುರು ಸಿಕ್ಕಿದೆ, ಬಾ ಹೋಗಿ ಬರೋಣ, ದೇವರಾಜ" ಎಂದರು. ಆಗ ದೇವರಾಜರು, " ಚಿಕ್ಕಮ್ಮ ನಾನು ಬಂದ ವಿಷಯವೇ ಬೇರೆ, ಒಂದು ಶುಭ ಸುದ್ದಿಯನ್ನು ತಂದಿದ್ದೇನೆ. ಈ ಸಮಯದಲ್ಲಿ ನೀವು ಆ...

ಅಮಾಯಕ ನೈಜ ಕಥೆ ( ಸಂಚಿಕೆ-೧೦)

 ಶಾಂತಿರಾಜನನ್ನು ಕಟ್ಟಿ ಹಾಕಿದ ಗೋಣಿ ಚೀಲವನ್ನು ಬಿಡಿಸಿ ನೋಡಿದಾಗ.. ಆ ದೃಶ್ಯ ನೋಡಿದ ಮನೆ ಮಂದಿಯೆಲ್ಲ ಒಮ್ಮೆಲೆ ಗಾಬರಿಗೊಂಡರು ಕೆಲವರು ಭಯದಿಂದ ಕಿರುಚಾಡಿದರು. ಶಾಂತಿರಾಜನ ದೇಹ ಮರುಗಟ್ಟಿ ಹೋಗಿತ್ತು. ಕೈ ಕಾಲುಗಳು ಜಡ್ಡುಗಟ್ಟಿ ಹೋಗಿತ್ತು.  ನರಕವೇದನೆಯನ್ನು ತಡೆಯಲಾರದೆ  ಅಲ್ಲಿಯೇ ಮಲ ಮೂತ್ರ ವಿಸರ್ಜನೆ ಆಗಿದೆ. ಯಾವುದೇ ಮಿಸುಕಾಟ ಇಲ್ಲ,   ಅವರಲ್ಲಿ ಯಾರೋ ಒಬ್ಬರು,  ಮೂಗಿನ ಬಳಿ ಕೈ ಹಿಡಿದರು, ಉಸಿರಾಡುತ್ತಿದ್ದಾನೆ.  ಮೂರ್ಛೆ ಹೋಗಿ ತುಂಬಾ ಹೊತ್ತಾಗಿದೆ. ಆದರೆ ಪ್ರಾಣ ಹೋಗಿಲ್ಲ.  ಮುಖಕ್ಕೆ ನೀರು ಚಿಮುಕಿಸಿದರು, ಆದರೆ ಪ್ರಜ್ಞೆ ಬರುತ್ತಿಲ್ಲ. ಹೀಗೆ ಕಮಲಕ್ಕ ನಡೆದ ಘಟನೆಯನ್ನು ವಿವರಿಸುತ್ತಿದ್ದಾರೆ,  ತನ್ನ ಕರುಳ ಕುಡಿಯ ಪ್ರಾಣ ವೇದನೆಯ ಕಥೆಯನ್ನು ಕಮಲಕ್ಕನ ಬಾಯಿಯಿಂದ ಕೇಳುತ್ತಿದ್ದಾಗ ಮರುದೇವಿಯವರು ಕೋಪ ಮತ್ತು ದುಃಖ್ಖದಿಂದ ಕುದಿಯುತ್ತಿದ್ದಾರೆ. ಕಮಲಕ್ಕ ಮತ್ತೆ ಆ ದುಃಖ್ಖದ ಕಥೆ ಯನ್ನು ಮುಂದುವರೆಸಿದರು. ಪುಂಡ ಯುವಕರ ಅಹಂಕಾರವೆಲ್ಲ ಇಳಿದುಹೋಗಿದೆ,  ಸಂಪೂರ್ಣ ಬೆವತು ಹೋಗಿದ್ದಾರೆ  ತಾವು ಮಾಡಿದ ಮಹಾ ಅಪರಾಧದ ಅರಿವಾಗಿ, ಬಹಳವಾಗಿ ನೊಂದು ಕೊಂಡರು. ಕೊನೆಗೆ ಯುವಕರೆಲ್ಲ ಒಂದು ನಿರ್ಧಾರಕ್ಕೆ ಬಂದರು. ಹೇಗಾದರು ಮಾಡಿ ಶಾಂತಿರಾಜನನ್ನು ಬದುಕಿಸ ಬೇಕು. ಕೂಡಲೇ,  ಯುವಕರೆಲ್ಲ ಸೇರಿ 'ಶಾಂತಿ'ಯನ್ನು ಭಾವಿ ಕಟ್ಟೆಯ ಬಳಿ ಕುಳ್ಳಿರಿಸಿ ತಲೆಗೆ ಕೊಡಪಾನದಿಂದ ನೀರ...

ಅಮಾಯಕ ನೈಜ ಕಥೆ ( ಸಂಚಿಕೆ-೦೯)

"ಶಾಂತಿ ರಾಜ," ಮೂರ್ಛೆ ಹೋಗುವ ಮೊದಲು ಅತಿಯಾದ ಪ್ರಾಣ ವೇದನೆಯಿಂದ ನರಳಿರಬಹುದು. ಆದರೆ ಈಗ ಅದನ್ನು ಕಲ್ಪಿಸಿಕೊಳ್ಳುವಾಗ ತಾಯಿ ಮರುದೇವಿ ಅಮ್ಮ ದುಃಖ್ಖ ಮತ್ತು ಕೋಪದಿಂದ ನಡುಗುತ್ತಿದ್ದಾರೆ.   ಉಸಿರಾಡಲು ಗಾಳಿಯೇ ಇಲ್ಲ, ಹೊಗೆ ಮಿಶ್ರಿತ ಗಾಳಿಯನ್ನು ಉಸಿರಾಡುತ್ತಿದ್ದಾನೆ. ಆದರೆ ಪ್ರಾಣ ಹೋಗಿಲ್ಲ. ಕ್ರಮೇಣ ಮೂರ್ಛೆ ತಪ್ಪಿ ಹೋಗಿರ ಬಹುದು.  ಏನು ತಪ್ಪು ಮಾಡದ "ಅಮಾಯಕ" ಯುವಕನೊಬ್ಬ ಪುಂಡ ಪೋಕರಿ ಹುಡುಗರ ಹುಚ್ಚಾಟಕ್ಕೆ ಬಲಿಯಾಗುತ್ತಿದ್ದಾನೆ.   ಯುವಕರ ಗುಂಪು ಊರೆಲ್ಲ ಸುತ್ತಾಡಿ, ಎಲ್ಲಾ ಕಡೆ ಕೀಟಲೆ ಮಾಡಿ. ಜುಗರಿಯಾಟ ಆಡಿ, ನದಿಯಲ್ಲಿ ಈಜಾಡಿ, ಚೆನ್ನಾಗಿ ಹಸಿವಾದಾಗ ಮದ್ಯಾಹ್ನದ ಊಟದ ಸಮಯ ಸುಮಾರು ಒಂದು ಗಂಟೆಯ ಹೊತ್ತಿಗೆ ಮನೆಗೆ ಬಂದರು.  ಮನೆಯ ಹೆಂಗಸರೆಲ್ಲ ಸೇರಿ ಊಟಕ್ಕೆ ಬಗೆ ಬಗೆಯ ಮೃಷ್ಟಾನ್ಹ ಭೋಜನ ತಯಾರಿ ಮಾಡಿದ್ದರು. ಮನೆಯಲ್ಲಿ ನೆಂಟರಿಷ್ಟರು ಮಕ್ಕಳು ಎಲ್ಲಾ ಸೇರಿ ತುಂಬಾ ಮಂದಿ ಇದ್ದಾರೆ. ಎಲ್ಲರು ಊಟ ಮಾಡಿದರು. ಯುವಕರು ತುಂಬಾ ಗಮ್ಮತ್ತಿನಿಂದ ಊಟ ಮಾಡಲು ಪ್ರಾರಂಭಿಸಿದರು. ಸುಮಾರು ಅರ್ಧ ಊಟ ಮಾಡಿರ ಬಹುದು, ಆಗ ಯಾರೋ ಒಬ್ಬರು "ನಿಮ್ಮ ಕುರುಂಟು "ಶಾಂತಿ" ಎಲ್ಲಿ" ? ಎಂದು ಕೇಳಿದರು. ಎಲ್ಲರು ಒಂದು ಕ್ಷಣ ಮೌನವಾದರು. !  ಊಟಕ್ಕೆ ಕುಳಿತ ಯುವಕರಿಗೆ ಒಮ್ಮೆಲೆ ಗಾಬರಿಯಾಯಿತು. ಬೆಳಿಗ್ಗೆ ತಾವು ಮಾಡಿದ ತಮಾಷೆ, ಹಾಗೂ ಶಾಂತಿಯನ್ನು ಗೋಣಿಚೀಲದಲ್ಲಿ ಕಟ್ಟಿ ಅಡಿಗೆ ಕೋಣೆಯ ಉ...

ಅಮಾಯಕ ನೈಜ ಕಥೆ ( ಸಂಚಿಕೆ-೦೮)

ಮದುವೆ ಮನೆಯಲ್ಲಿ ನಡೆದ ಕಥೆಯನ್ನು ಕಮಲಕ್ಕ ಮರುದೇವಿ ಅವರಲ್ಲಿ, ವಿವರಿಸುತ್ತಿದ್ದಾರೆ....  ಶಾಂತಿರಾಜರನ್ನು ಗೋಣಿಚೀಲದಲ್ಲಿ ತುಂಬಿಸಿದ ಆ ಪುಂಡ ಯುವಕರು, ಅಡಿಗೆ ಕೋಣೆಯ ಅಟ್ಟದಲ್ಲಿ ಅಂದರೆ ಆ ಕಾಲದಲ್ಲಿ ಬಿತ್ತನೆಗೆ ಬೀಜಗಳನ್ನು ಮತ್ತು ಹಪ್ಪಳ, ಸೆಂಡಿಗೆ ಉಪ್ಪಿನಕಾಯಿ ಮುಂತಾದವುಗಳನ್ನು ಶೇಕರಿಸಿಡುವ, ಚೆನ್ನಾಗಿ ಹೊಗೆಯಾಡುವ ಉಪ್ಪರಿಗೆಯ ಕೋಣೆ, ಅಡಿಗೆ ಕೋಣೆಯ ಮಾಳಿಗೆ, ಆ ಸ್ಥಳದಲ್ಲಿ ಯಾರು ಕೂಡ ಸ್ವಲ್ಪ ಹೊತ್ತು ನಿಂತರೆ, ದಟ್ಟವಾದ ಹೊಗೆಗೆ ಉಸಿರು ಕಟ್ಟುತ್ತದೆ, ಮತ್ತು ಕಣ್ಣು ಉರಿಯುತ್ತದೆ. ಅಂತಹ ಜಾಗದಲ್ಲಿ 'ಶಾಂತಿ'ಯನ್ನು ಗೋಣಿಚೀಲದಲ್ಲಿ ಕಟ್ಟಿ ಹಾಕಿದ್ದಾರೆ. ಹೀಗೆ ಕಟ್ಟಿ ಹಾಕಿದ ಪುಂಡ ಯುವಕರ ತಂಡ, ಜೋರಾಗಿ ನಗುತ್ತಾ, ಕಿರುಚಾಡುತ್ತ ಎಲ್ಲರಿಗೂ ತಮಾಷೆ ಮಾಡುತ್ತಾ, ಚೇಷ್ಟೆ ಮಾಡುತ್ತಾ ಇತ್ತು.  ಚೆನ್ನಾಗಿ ಬೆಳಗ್ಗಿನ ತಿಂಡಿ ತಿಂದು ಹೊಟ್ಟೆ ತುಂಬಿಸಿ ಕೊಂಡು ಊರು ಸುತ್ತಲು, ನದಿಯಲ್ಲಿ ಈಜಾಡಿ ಮೋಜು ಮಸ್ತಿ ಮಾಡಲು ಹೊರಟು ಹೋಯಿತು.      ಇತ್ತ, ಅಡಿಗೆ ಮನೆಯ ಉಪ್ಪರಿಗೆಯಲ್ಲಿ ದಟ್ಟವಾದ ಹೊಗೆ ಆವರಿಸುತ್ತಿದೆ ಶಾಂತಿರಾಜನಿಗೆ ಉಸಿರಾಡಲು ವಿಪರೀತ ಕಷ್ಟ ಆಗಿರಬಹುದು. ಕಣ್ಣನ್ನು ಬಿಗಿಯಾಗಿ ಮುಚ್ಚಿಕೊಂಡರೂ ಕೂಡ ಆ ಉರಿ ಬಿಸಿ ಹೊಗೆಯನ್ನೇ ಉಸಿರಾಡ ಬೇಕು. ಉಸಿರಾಡಲು ಅಲ್ಲಿ ಶುದ್ಧ ಗಾಳಿಯ ಲವಲೇಷವೂ ಇಲ್ಲ. ವಿಪರೀತ ಬೆವರಿರ ಬಹುದು, ಬಾರಿ ಸುಸ್ತಿನಿಂದ, ಕೆಮ್ಮುತ್ತಾ ಕೆಮ್ಮುತ್ತಾ ಪ್ರಾಣ ವೇದನೆ ...

ಅಮಾಯಕ ನೈಜ ಕಥೆ ( ಸಂಚಿಕೆ-೦೭)

ಮರುದೇವಿಯವರು ಒತ್ತಾಯ ಪಡಿಸಿ ಕೇಳಿದ ನಂತರ, ಕಮಲಕ್ಕ, ಮದುವೆ ಮನೆಯಲ್ಲಿ ನಡೆದ ಘಟನೆಗಳನ್ನು, ಒಂದೊಂದಾಗಿ ವಿವರಿಸತೊಡಗಿದರು.      ಮದುವೆ ಮನೆಯಲ್ಲಿ, ಸಂಭ್ರಮ ಸಡಗರ, ನೆಂಟರಿಷ್ಟರೆಲ್ಲ ಸೇರಿದ್ದರು. ಅಂತೂ ಮದುವೆಯ ಕಾರ್ಯಗಳೆಲ್ಲ ಸುಂದರವಾಗಿ ನಡೆದು ಹೋಯಿತು. ಮಧುಮಗ ಮತ್ತು ಮಧುಮಗಳ ಊರು ಅಕ್ಕ ಪಕ್ಕದಲ್ಲೇ, ಇಬ್ಬರ ಮನೆಯವರು ಮೊದಲೇ ಪರಿಚಯಸ್ಥರು ಮತ್ತು ಸಂಬಂಧಿಕರು. ಮದುವೆ ಮುಗಿದಿದೆ. ಮಧುಮಗಳ ಮನೆಗೆ ಬೀಗರ ಊಟಕ್ಕೆ ಬರುವ ಸಂಪ್ರದಾಯ, ಹಾಗೆ ಬಂದಿದ್ದಾರೆ. ಬರುವಾಗ ಮಧುಮಗನ ಜೊತೆಯಲ್ಲಿ ಯಾರಾದರೂ ಒಬ್ಬರು ಬರುವುದು ಸಂಪ್ರದಾಯ. ಹೀಗೆ ಬಂದವರನ್ನು "ಪಾಸಾಡಿ" ಅಥವಾ "ಕುರುಂಟು" ಎನ್ನುತ್ತಾರೆ. ಹಾಗೆ 'ಪಾಸಾಡಿ' ಅಥವಾ 'ಕುರುಂಟು' ಆಗಿ ಬಂದ ಯುವಕನೇ, ಮರುದೇವಿ ಅಮ್ಮನ ಮಗ "ಶಾಂತಿರಾಜ". "ಶಾಂತಿ" ಮಡಿಕೇರಿ ಸಾಕಮ್ಮನ ಎಸ್ಟೇಟ್ನಲ್ಲಿದ್ದವರು  ತನ್ನ ಮನೆಗೆ ಹೋಗದೆ, ತನ್ನ ಗೆಳೆಯರ ಮನೆಯ ಮಧುವೆ ಕಾರ್ಯಕ್ರಮಕ್ಕೆ ಬಂದಿದ್ದರು.  ಹೀಗೆ ವರನ ಜೊತೆ ವಧುವಿನ ಮನೆಗೆ "ಪಾಸಾಡಿ"  ಬಂದವರನ್ನು ಗೋಳು ಹೊಯ್ದು ಕೊಳ್ಳುವುದು ತಮಾಷೆ ಮಾಡುವುದು ಸಾಮಾನ್ಯ.  ಆದರೆ ಅದು ಇಲ್ಲಿ ಅತಿಯಾಗಿ ಹೋಯಿತು. ಆ ಮನೆಗೆ ಬಂದವರಲ್ಲಿ ಒಂದಷ್ಟು ಪುಂಡ ಯುವಕರ ಪಡೆಯು ಸೇರಿತ್ತು.  ಇವರೆಲ್ಲ ಸೇರಿ, ಯಾರಿಗಾದರೂ ಕೀಟಲೆ ಮಾಡಿ ಸಂತೋಷ ಪಡುತ್ತಿದ್ದರು. ತಿಂದುಂಡು ನದಿಯಲ್ಲಿ ಈಜಾಡಿ ಉಂಡದ್ದನ್ನು...

ಅಮಾಯಕ ನೈಜ ಕಥೆ ( ಸಂಚಿಕೆ-೦೬)

ಮದುವೆಯ ಸಮಾರಂಭವೊಂದರಲ್ಲಿ ಮರುದೇವಿ ಅವರಿಗೆ ತನ್ನ ಮಗನದ್ದು ಸ್ವಭಾವಿಕ ಸಾವಲ್ಲ ಅದು ಕೊಲೆ ಎಂದು ತಿಳಿಯುತ್ತದೆ.  ಹೆಂಗಸರಿಬ್ಬರು ಇವರ ಮಗ ಶಾಂತಿರಾಜನ ಬಗ್ಗೆ ಮಾತನಾಡುವುದನ್ನು ಇವರು ಆಕಸ್ಮಿಕವಾಗಿ ಕೇಳಿಸಿಕೊಂಡಿರುತ್ತಾರೆ.  ಕೂಡಲೇ ಆ ಮಹಿಳೆಯಲ್ಲಿ ವಿಚಾರಿಸಿದಾಗ ಅವರು ವಿಷಯವನ್ನು ಸರಿಯಾಗಿ ಹೇಳಲಿಲ್ಲ.  ಮಾತನಾಡಿಕೊಂಡಿದ್ದ ಮಹಿಳೆಯರಲ್ಲಿ ಒಬ್ಬರ ಪರಿಚಯ 'ಮರುದೇವಿಯವರಿಗೆ ಇತ್ತು. ಮಗನದ್ದು ಸಹಜ ಸಾವಲ್ಲ ಕೊಲೆ ಎಂದು ತಿಳಿದ ಕೂಡಲೆ ಮರುದೇವಿ ಅಮ್ಮ,ಕೋಪ ಆವೇಶದಿಂದ ಕ್ರುದ್ರರಾದರು, ತನ್ನ ಬಗ್ಗೆಯೇ ತನಗೆ ಜಿಗುಪ್ಸೆ ಆಯಿತು. ನನ್ನ ಮಗನ ಸಾವಿನ ಬಗ್ಗೆ ನಿಜ ವಿಷಯ ಹೇಗಾದರೂ ಮಾಡಿ ತಿಳಿದು ಕೊಳ್ಳಲೇ ಬೇಕು ಎಂದು ದೃಢ ನಿರ್ಧಾರಕ್ಕೆ ಬಂದರು. ಮದುವೆಯಲ್ಲಿ, ಇವರ ಮಗನ ಸಾವಿನ ಬಗ್ಗೆ ಮಾತನಾಡುತಿದ್ದ ಮಹಿಳೆಯರಲ್ಲಿ ಒಬ್ಬಾಕೆ ಕಮಲಕ್ಕ .  ಆ ಮಹಿಳೆಯ ಮನೆ , ಇವರಿಗೆ ತಿಳಿದಿತ್ತು. ಒಂದು ದಿನ ಇವರು ಬೆಳಗ್ಗಿನ ಹೊತ್ತು, ಕಮಲಕ್ಕನನ್ನು ಹುಡುಕಿಕೊಂಡು ಅವರ ಮನೆಯತ್ತ ಹೋದರು. ಇವರನ್ನು ನೋಡಿದ ಕೂಡಲೇ ಕಮಲಕ್ಕ ಗಾಬರಿಗೊಂಡರೂ ತೋರ್ಪಡಿಸಿಕೊಳ್ಳಲಿಲ್ಲ. ಹಾಗೂ ಮನೆಗೆ ಬಂದ ಇವರನ್ನು ಕುಳ್ಳಿರಿಸಿ ಉಪಚರಿಸಿದರು, ಮರುದೇವಿ ಅಮ್ಮ ಮಾತನಾಡುತ್ತ ನೇರವಾಗಿ ತನ್ನ ಮಗನ ವಿಷಯಕ್ಕೆ ಬಂದರು. ಆಗ ಕಮಲಕ್ಕ " ನೋಡಿ ಅಕ್ಕಾ, ನನಗೆ ಆ ಘಟನೆಯ ಬಗ್ಗೆ ಗೊತ್ತಿಲ್ಲ, ಯಾರೋ ಮಾತನಾಡುವುದನ್ನು ಕೇಳಿಸಿಕೊಂಡಿದ್ದೇನೆ ಅಷ್ಟೇ " ಎಂದರು. ಆಗ ಮರ...

ಅಮಾಯಕ ನೈಜ ಕಥೆ ( ಸಂಚಿಕೆ-೦೫)

ಮರುದೇವಿಯವರ ಮೂವರು ಮಕ್ಕಳಲ್ಲಿ ಹಿರಿಯವನು ಗಂಡು ಮಗ ಶಾಂತಿ,, ಶಾಂತಿರಾಜ. ಸುಮಾರು ಮೂವತ್ತು ವರ್ಷದ ಯುವಕ. ಅವಿವಾಹಿತ, ಇಬ್ಬರು ಹೆಣ್ಣು ಮಕ್ಕಳು ಸರಸ್ವತಿ ಮತ್ತು ಸುನಂದಾ, ಶಾಂತಿರಾಜನಿಗಿಂತ  ವಯಸ್ಸಿನಲ್ಲಿ ತುಂಬಾ ಸಣ್ಣವರು.      ತನ್ನ ಗಂಡು ಮಕ್ಕಳಲ್ಲಿ ಬದುಕಿ ಉಳಿದಿದ್ದವನು 'ಶಾಂತಿರಾಜ' ಒಬ್ಬನೆ.  ಅವನು ಕೆಲ ಸಮಯದಿಂದ ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದು ಈ ದಿನ ಪ್ರಾಣ ಬಿಟ್ಟ. ಹೆತ್ತ ತಾಯಿಯ ರೋದನ ಮುಗಿಲು ಮುಟ್ಟಿತು. ಅದು ಮಳೆಗಾಲದ ಸಮಯ ಎಡೆಬಿಡದೆ ಮಳೆ ಸುರಿಯುತ್ತಿದೆ. ಇವರಿರುವ ಮನೆಯಿಂದ ಪಟ್ಟಣಕ್ಕೆ ಹೋಗಲು ನದಿ ದಾಟ ಬೇಕು. ನದಿಯು ತುಂಬಿ ಹರಿಯುತ್ತಿದೆ. ದೋಣಿಯ ವ್ಯವಸ್ಥೆ ಇಲ್ಲ.  ತೆಪ್ಪ ಕಟ್ಟಿರಲಿಲ್ಲ. ನೆಂಟರಿಷ್ಟರು ಇರುವುದು ಸ್ವಲ್ಪ ದೂರದ ಊರಿನಲ್ಲಿ.  ಅವರನ್ನು ಕರೆಯಲು ನದಿ ದಾಟಿ ಹೋಗಬೇಕು. ಅದು ಈಗ ಅಸಾಧ್ಯ.   ಇದರಿಂದಾಗಿ ಅವರ್ಯಾರು ಮಗನ ಶವ ಸಂಸ್ಕಾರಕ್ಕೆ ಭಾಗವಹಿಸುವಂತಿಲ್ಲ. ನದಿಯಲ್ಲಿ ನೀರು ಇಳಿಯುವ ಲಕ್ಷಣ ಕಾಣುತ್ತಿಲ್ಲ. ಬೇರೆ ದಾರಿ ತೋಚದೆ ಶವ ಸಂಸ್ಕಾರಕ್ಕೆ ರೆಡಿ ಮಾಡಿದರು.  ನೆರೆಹೊರೆಯವರು ಎಲ್ಲಾ ವ್ಯವಸ್ಥೆ ಮಾಡಿಕೊಟ್ಟರು. ಆದರೆ ವಿಧಿ ವಿಧಾನಗಳನ್ನು ಇವರೆ ನೆರೆವೆರಿಸುತ್ತಿದ್ದಾರೆ. ಆ  ಎರಡು ಹೆಣ್ಣು ಮಕ್ಕಳೊಂದಿಗೆ ಸೇರಿ, ತಾಯಿ ತನ್ನ ಗಂಡು ಕುಡಿ ಒಬ್ಬನೇ ಮಗನ ಅಂತ್ಯ ಕ್ರಿಯೆಯನ್ನು ಮಾಡುತ್ತಿದ್ದಾರೆ. ಇವರ ಸಂಬಂಧಿಕ ಊರಿನ ಹಿ...

ಅಮಾಯಕ ನೈಜ ಕಥೆ ( ಸಂಚಿಕೆ-೦೪)

ತಂದೆ, ತಾಯಿಯ ಅಗಲಿಕೆ.. ಗಂಡನ ಅಗಲಿಕೆ.. ಖಾಯಿಲೆಯಿಂದ ಸತ್ತು ಹೋದ ತನ್ನ ಐದಾರು ಕುಡಿಗಳು... ತಮ್ಮನೊಂದಿಗೆ ಮನಸ್ತಾಪ.. ಇದೀಗ, ಮನೆಗೆ ಗಂಡು ದಿಕ್ಕಾಗಿದ್ದ  ತನ್ನ ಜೀವದಂತಿದ್ದ ಮಗ, ಜೀವಚ್ಛವದಂತೆ ಮಲಗಿದ್ದಾನೆ.  ಮರುದೇವಿ ಅವರಿಗೆ ತಾನು ಜೀವನದುದ್ದಕ್ಕೂ ನೋವನ್ನೇ ಅನುಭವಿಸಲು ಹೊಟ್ಟಿದವಳೇ ಎಂದು ಬಹಳ ದುಃಖ್ಖವಾಗುತ್ತಿತ್ತು. ಮಗ "ಶಾಂತಿರಾಜ"ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿಲ್ಲ. ತಾಯಿ ಇದ್ದ ದೇವರಿಗೆಲ್ಲ ಹರಕೆ ಹೊತ್ತುಕೊಂಡರು. ಬೇರೆ ಬೇರೆ ವೈದ್ಯರುಗಳನ್ನು ಕರೆ ತಂದು ಚಿಕೆತ್ಸೆ ಕೊಡಿಸಿದರು. ಆದರೆ ಅದ್ಯಾವುದು ಪರಿಣಾಮ ಬೀರಲಿಲ್ಲ. ಮಗನ ಅರೋಗ್ಯ ಸುಧಾರಿಸಲು ಇಲ್ಲ. ಆತನ ದೇಹ ಚಿಕಿತ್ಸೆಗೆ ಸ್ಪಂದಿಸಲೂ ಇಲ್ಲ.  ಇದರಿಂದಾಗಿ ತಾಯಿ ಮತ್ತು ತಂಗಿಯಂದಿರು ಸದಾ  ಚಿಂತೆಯಲ್ಲಿ ಇರುತ್ತಿದ್ದರು. ಮಗನನ್ನು ದೂರದ ಪಟ್ಟಣಕ್ಕೆ ಕರೆದೊಯ್ದು ಒಳ್ಳೆ ಚಿಕಿತ್ಸೆ ಕೊಡಿಸಿದರೆ ಚೇತರಿಸಬಹುದು ಎಂಬ ಭರವಸೆ ಇತ್ತು. ಹೇಗಾದರೂ ಮಾಡಿ ಮಗನಿಗೆ ಒಳ್ಳೆ ಚಿಕಿತ್ಸೆ ಕೊಡಿಸಬೇಕು. ಅದಕ್ಕಾಗಿ ಹಣ ಹೊಂದಿಸಿ ಕೊಳ್ಳಬೇಕು, ಎಂದು ಯೋಚಿಸುತ್ತಿದ್ದರು.   ಹೀಗೆ ಕೆಲವು ದಿನಗಳು ಕಳೆದವು. ಮರುದಿನ ಮಗನನ್ನು ಚಿಕಿತ್ಸೆಗಾಗಿ ಪಟ್ಟಣಕ್ಕೆ ಕರೆದೊಯ್ಯುವುದು ಎಂದು ನಿರ್ಧರಿಸಿದರು. ಕರೆದೊಯ್ಯಲು ಎತ್ತಿನ ಗಾಡಿಯನ್ನು ಹೇಳಿದ್ದರು. ಮರುದಿನ ಮುಂಜಾನೆಯ ಸಮಯ, ಮಗ ಶಾಂತಿ ಮಲಗಿದ್ದಲ್ಲಿಂದ ಏನೋ ತೊದಲುತ್ತಿದ್ದ, ಒಮ್ಮೆ ಜೋರಾಗಿ ಅಮ್...

ಅಮಾಯಕ ನೈಜ ಕಥೆ ( ಸಂಚಿಕೆ-೦೩)

"ಮರುದೇವಿ ಅಮ್ಮ" ತನ್ನ ಮತ್ತು ತನ್ನಿಬ್ಬರು ಮಕ್ಕಳೊಂದಿಗೆ, ಬೊಳ್ಳಾರಿನ ಚಂದಯ್ಯ ಕೊಟ್ಟಾರಿಯವರ ಮನೆಯಿಂದ ಹೊರಟು,  ತಮ್ಮ ತಂದೆಯವರ ಸ್ನೇಹಿತರಾದ ಇಚಿಲಂಪಾಡಿಯ ಪುರೋಹಿತರ ಮನೆಗೆ ಬಂದರು.  ಪುರೋಹಿತರಿಗೆ ಸ್ವಲ್ಪ ಜಮೀನು ಇತ್ತು. ಆದರೆ ವಯೋವೃದ್ಧರಾದ ಪುರೋಹಿತರಿಗೆ ಆ ಜಮೀನನ್ನು ಸಾಗುವಳಿ ಮಾಡಿಸಲು ಸಾಧ್ಯ ಆಗುತ್ತಿರಲಿಲ್ಲ. ಮರುದೇವಿಯವರು, ಪುರೋಹಿತರ,  ಹಡಿಲು ಗದ್ದೆಯನ್ನು ಗೇಣಿಗೆ ವಹಿಸಿಕೊಂಡು ಕೆಲಸದವರ ಸಹಾಯದಿಂದ ಅದರಲ್ಲಿ ಭತ್ತ ದಾನ್ಯ ಮತ್ತು ತರಕಾರಿ ಬೆಳೆಸಿದರು. ಜೀವನ ಹೇಗೋ ತಕ್ಕಮಟ್ಟಿಗೆ ಸಾಗುತಿತ್ತು. ಆದರೆ ಕೆಲವು ಸಮಯದಿಂದ ಮಗ 'ಶಾಂತಿ' ಎಲ್ಲಿದ್ದಾನೋ ತುಂಬಾ ದಿನದಿಂದ ತನ್ನ ಸಂಪರ್ಕದಲ್ಲಿ ಇಲ್ಲ. ಎಲ್ಲಿದ್ದಾನೋ ಸುಳಿವೇ ಇಲ್ಲ, ಎಂದು ಈಕೆ ಗಾಬರಿಗೊಳ್ಳುತ್ತಿದ್ದರು. ಮತ್ತೆ ಅದೇ ಕ್ಷಣ ಜೀವನದ ಈ ಕಷ್ಟದ ಸಮಯದಲ್ಲಿ ಆತ ನನ್ನಿಂದ ದೂರದಲ್ಲಿ ಇದ್ದರು, ಎಲ್ಲೊ ಮಡಿಕೇರಿ ಕಡೆ ಇದ್ದಾನಂತೆ ಎಲ್ಲಾದರೂ ಸುಖವಾಗಿರಲಿ, ಅಂದುಕೊಳ್ಳುತ್ತಿದ್ದರು. ಆದರೆ ಎಷ್ಟಾದರೂ ಬೆಳೆದುನಿಂತ ಮಗ ತನ್ನ ಬಳಿಯಲ್ಲಿ ಇಲ್ಲ, ಅನ್ನುವ ಕೊರಗು ಆ ಮಾತೃ ಹೃದಯಕ್ಕೆ ಸದಾಕಾಲ ಕಾಡುತಿತ್ತು. ಮಗನಿಗೆ ಮೂವತ್ತರ ಹರೆಯವಾದರೂ ಮದುವೆ ಮಾಡಿಸಲು ಸಾಧ್ಯ ಆಗಲೇ ಇಲ್ಲ. ಅನ್ನುವ ಚಿಂತೆ ಆ ಮಾತೃ ಹೃದಯಕ್ಕೆ ಸದಾ ಕಾಲ ಕಾಡುತಿತ್ತು. ಹೆಣ್ಣು ಮಕ್ಕಳು ಕೂಡ ಬೆಳೆಯುತ್ತಾ ಇದ್ದಾರೆ. ಮುಂದೆ ಅವರಿಗೂ ಮದುವೆ ಮಾಡಿಸಬೇಕು. ಅಲೆಮಾರಿ ಜೀವನದಿಂದ ಮಕ್ಕಳ ವಿದ್...

ಅಮಾಯಕ ನೈಜ ಕಥೆ ( ಸಂಚಿಕೆ-೦೨)

ಮರುದೇವಿಯಮ್ಮನವರು ತನ್ನ ಮಕ್ಕಳೊಂದಿಗೆ ಮನೆ ಬಿಟ್ಟು ಬಂದವರು ಸೇರಿಕೊಂಡಿದ್ದು. ತಮ್ಮದೇ ದೂರದ ಸಂಬಂದಿಕರಾದ, ಹಾಗೂ ಬಾಲ್ಯದಲ್ಲಿ ತಮ್ಮ ಮನೆಯಲ್ಲೇ ವಿದ್ಯಾಭ್ಯಾಸ ಮಾಡುತಿದ್ದ, ಬೊಳ್ಳಾರ್ ಚಂದಯ್ಯ ಕೊಟ್ಟಾರಿಯವರ ಮನೆಗೆ, ಕೆಲವಾರು ದಿನಗಳು ಕಳೆದು ಹೋದವು. ಇವರು ಮಾನಸಿಕವಾಗಿಯೂ ದೈಹಿಕವಾಗಿಯು  ಸ್ವಲ್ಪ ಸುಧಾರಿಸಿಕೊಂಡರು. ಈ ಮದ್ಯೆ, ಒಂದು ದಿನ ಇವರ ಅಮ್ಟುರಿನ ಮನೆಯ ಕಡೆಯ ಒಕ್ಕಲಿನವನೊಬ್ಬ, ಇವರಿಗೆ ಇವರ ತಮ್ಮ ಹಲ್ಲೆ ನಡೆಸಿದ ವಿಷಯ ತಿಳಿದು, ಇವರಿದ್ದ ಮನೆಯನ್ನು ಹುಡುಕಿಕೊಂಡು ಬೊಳ್ಳಾರಿನ ಮನೆಗೆ ಬಂದಿದ್ದ.    ಈತ ಮತ್ತು ಮರುದೇವಿಯವರ ತಮ್ಮ ಪಟೇಲ ನೇಮಿರಾಜರು, ಇವರಿಬ್ಬರೂ ಬದ್ದ ವೈರಿಗಳು.  ಈತ ಬಂದವನು ನಡೆದ ಗಲಾಟೆಯ ಬಗ್ಗೆ ಎಲ್ಲಾ ವಿಚಾರಿಸಿದ ನಂತರ, "ನೀವು ಒಂದು ಮಾತು ಹೇಳಿ ಅಕ್ಕಾ, ಪಟೇಲರ ಕೈ ಕಾಲು ನಾವು ಮುರಿಯುತ್ತೇವೆ" ಎಂದು ಬಿಟ್ಟ ಆಗ ಮರುದೇವಿಯವರು  ಒಂದು ಕ್ಷಣ ಮೌನವಾದರು. ತುಂಬಾ ಆಲೋಚಿಸಲು ಪ್ರಾರಂಭಿಸಿದರು.       ಆಗ ಕೊಟ್ಟಾರಿಯವರ ತಾಯಿ   "ಬೇಡ ಮರುದೇವಿ, ಅಂತಹ ನಿರ್ಧಾರಕ್ಕೆ ಬರಬೇಡ.  ನಿನಗಿಬ್ಬರು ಹೆಣ್ಣು ಮಕ್ಕಳು ಇದ್ದಾರೆ "  ಅವರ ಭವಿಷ್ಯದ ಬಗ್ಗೆ ಯೋಚಿಸು ಎಂದರು. ಆಗ 'ಮರುದೇವಿ ಅಮ್ಮ' ಒಕ್ಕಲಿನವನಲ್ಲಿ "ನನಗಾದ ನೋವು ನಾನು ಎದುರಿಸುತ್ತೇನೆ.  ಸದ್ಯಕ್ಕೆ ನಿನ್ನ ಯಾವುದೇ ಸಹಾಯ ಬೇಕಾಗಿಲ್ಲ" ಎಂದರು.     ಆಗ ...

ಅಮಾಯಕ ನೈಜ ಕಥೆ ( ಸಂಚಿಕೆ-೦೧)

ಆಕೆ ಮರುದೇವಿ ಅಮ್ಮ. ಜೈನರ ಅಳಿಯ ಸಂತಾನದ ಶ್ರೀಮಂತ ಜಮೀನ್ದಾರಿ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಇವರದು ಊರಿನ ಪಟೇಲರ ಕುಟುಂಬ. ಈಕೆ ಗಟ್ಟಿಗಿತ್ತಿ, ಸ್ವಾಭಿಮಾನಿ ಹೆಂಗಸು. ಛಲ ಧೈರ್ಯ ಹಠಗಳಿಗೆ ಇನ್ನೊಂದು ಹೆಸರೇ 'ಮರುದೇವಿಯಮ್ಮ' ಎಂಬಂತೆ ಇತ್ತು ಅವರ ವ್ಯಕ್ತಿತ್ವ.       ತನ್ನ ಜೀವನದುದ್ದಕ್ಕೂ ಅಂದಿನ ಪುರುಷ ಪ್ರದಾನ ಸಮಾಜದಲ್ಲಿ, ತಾನು ಯಾವುದೇ ಪುರುಷರಿಗೆ ಕಮ್ಮಿ ಇಲ್ಲ ಎಂಬಂತೆ ಜೀವಿಸಿದಾಕೆ. ಪಟೇಲರ ಕುಟುಂಬದಲ್ಲಿ ಹುಟ್ಟಿದ ಈಕೆ, ಪುರುಷರಿಗೆ ಮೀಸಲಾಗಿದ್ದ ಊರಿನ 'ಪಟೇಲರ' ಹುದ್ದೆಯನ್ನು ಮಹಿಳೆಯರಿಗ್ಯಾಕೆ ಕೊಡಬಾರದು ಎಂದು ಹೋರಾಟ ಮಾಡಿದಾಕೆ. ಮಾತ್ರವಲ್ಲದೆ ಒಂದೊಮ್ಮೆ ಪಟೇಲ ಹುದ್ದೆಗಾಗಿ ಅರ್ಜಿಯನ್ನು ಸಲ್ಲಿಸಿದಾಕೆ.    ಇವರ ಈ ನಡೆ ಇವರ ಆ ದೊಡ್ಡ ಅವಿಭಕ್ತ ಕುಟುಂಬದ, ಮನೆಯ ಪುರುಷ ಮತ್ತು ಮಹಿಳಾ ಸದಸ್ಯರೆಲ್ಲರಿಗು ಸಹಿಸಲಸಾಧ್ಯವಾಗಿತ್ತು. ಆದರೆ, ಈಕೆಯದು ಅದಾವುದಕ್ಕೂ ಅಂಜುವ ವ್ಯಕ್ತಿತ್ವವಾಗಿರಲಿಲ್ಲ.       ಇವರ ಒಬ್ಬನೇ ಗಂಡು ಮಗ 'ಶಾಂತಿ' ಯಾನೆ "ಶಾಂತಿರಾಜ" ಈ ಕಥೆಯ ದುರಂತ ಕಥಾನಾಯಕ.      ಆಗಿನ ಬ್ರಿಟಿಷ್ ಸರಕಾರದ ಅಧಿಕಾರಿಗಳು, ಕಾರ್ಯ ನಿಮಿತ್ತ ಪಟೇಲರ ಮನೆಗೆ ಭೇಟಿ ನೀಡುತ್ತಿದ್ದರು.   ಒಮ್ಮೆ "ಶಾಂತಿ" ಮಗುವಾಗಿದ್ದ ಸಂದರ್ಭದಲ್ಲಿ, ಒಬ್ಬ ಉನ್ನತ ಮಟ್ಟದ ಬ್ರಿಟೀಷ್ ಅಧಿಕಾರಿ ಇವರ ಮನೆಗೆ ಬಂದಿದ್ದರು. ಮದ್ಯಾಹ್ನದ ಹೊತ್ತು ಊ...

ಅತೀ ಶೀಘ್ರದಲ್ಲಿ ನಿಮ್ಮ ಮುಂದೆ... !ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ. ಮಿಥುನ್ ಜೈನ್ ಬರೆದಿರುವ ನೈಜ ಕಥೆ. !" ಅಮಾಯಕ " ನಿರೀಕ್ಷಿಸಿ.........

"ಅಮಾಯಕ" (ನೈಜ ಕಥೆ ) ಲೇಖಕ :- ಮಿಥುನ್ ಜೈನ್  ಲೇಖಕರ ಮಾತು ---------------------- ಕಳೆದ ಶತಮಾನದ ಆದಿಯಲ್ಲಿ, ಅಂದರೆ, ಸರಿ ಸುಮಾರು 85 ವರುಷಗಳ ಹಿಂದೆ, ದಕ್ಷಿಣಕನ್ನಡ ಜಿಲ್ಲೆಯ ಮನೆಯೊಂದರಲ್ಲಿ ಶುಭ ಸಮಾರಂಭದ ಸಂದರ್ಭ ನಡೆದ ನಮ್ಮ ಕುಟುಂಬದ ವ್ಯಕ್ತಿಯೊಬ್ಬರ, ಸಾವಿನ ಸುತ್ತ ಬರೆದಿರುವ ಒಂದು ಭಯಾನಕ ಕಥೆ.        ವಿಲಕ್ಷಣ ವ್ಯಕ್ತಿತ್ವದ ಕೆಲವು ಜನರಿಂದ ಅಮಾಯಕರಿಗೆ ಯಾವ ರೀತಿ ತೊಂದರೆ ಆಗುತ್ತದೆ. ಹಾಗೂ ತಮಾಷೆ, ಚೇಷ್ಟೆಗಳು ಅತಿಯಾದರೆ ಅದರ ಪರಿಣಾಮ ಏನಾಗುತ್ತದೆ, ಅನ್ನುವುದಕ್ಕೆ ಈ ಕಥೆಯೇ ಉತ್ತಮ ಉದಾಹರಣೆಯಾಗಿದೆ.  ಈ ಕಥೆಯಲ್ಲಿ ನಡೆದಿರುವ ಘಟನೆಗಳಿಗೆ ಮತ್ತು ಅಲ್ಲಿ ಪ್ರಸ್ತುತ ವಾಸವಾಗಿರುವ ವ್ಯಕ್ತಿಗಳಿಗೆ ಯಾವುದೇ ನೇರ ಸಂಬಂಧವಿಲ್ಲ. 'ಈ ಕಥೆಯನ್ನು' ಮಡಿದು ಹೋದ ಆ ನನ್ನ ಹಿರಿಯರಿಗೆ ಅರ್ಪಿಸುತ್ತಿದ್ದೇನೆ. 1.http://ontinavika.blogspot.com/2022/07/blog-post_5.html 2.                               ನಿಮ್ಮವನು,     ಎನ್. ಮಿಥುನ್ ಜೈನ್