ವಿಷಯಕ್ಕೆ ಹೋಗಿ

ಅಮಾಯಕ ನೈಜ ಕಥೆ ( ಸಂಚಿಕೆ-೦೮)

ಮದುವೆ ಮನೆಯಲ್ಲಿ ನಡೆದ ಕಥೆಯನ್ನು ಕಮಲಕ್ಕ ಮರುದೇವಿ ಅವರಲ್ಲಿ, ವಿವರಿಸುತ್ತಿದ್ದಾರೆ....

 ಶಾಂತಿರಾಜರನ್ನು ಗೋಣಿಚೀಲದಲ್ಲಿ ತುಂಬಿಸಿದ ಆ ಪುಂಡ ಯುವಕರು, ಅಡಿಗೆ ಕೋಣೆಯ ಅಟ್ಟದಲ್ಲಿ ಅಂದರೆ ಆ ಕಾಲದಲ್ಲಿ ಬಿತ್ತನೆಗೆ ಬೀಜಗಳನ್ನು ಮತ್ತು ಹಪ್ಪಳ, ಸೆಂಡಿಗೆ ಉಪ್ಪಿನಕಾಯಿ ಮುಂತಾದವುಗಳನ್ನು ಶೇಕರಿಸಿಡುವ, ಚೆನ್ನಾಗಿ ಹೊಗೆಯಾಡುವ ಉಪ್ಪರಿಗೆಯ ಕೋಣೆ, ಅಡಿಗೆ ಕೋಣೆಯ ಮಾಳಿಗೆ, ಆ ಸ್ಥಳದಲ್ಲಿ ಯಾರು ಕೂಡ ಸ್ವಲ್ಪ ಹೊತ್ತು ನಿಂತರೆ, ದಟ್ಟವಾದ ಹೊಗೆಗೆ ಉಸಿರು ಕಟ್ಟುತ್ತದೆ, ಮತ್ತು ಕಣ್ಣು ಉರಿಯುತ್ತದೆ. ಅಂತಹ ಜಾಗದಲ್ಲಿ 'ಶಾಂತಿ'ಯನ್ನು ಗೋಣಿಚೀಲದಲ್ಲಿ ಕಟ್ಟಿ ಹಾಕಿದ್ದಾರೆ.
ಹೀಗೆ ಕಟ್ಟಿ ಹಾಕಿದ ಪುಂಡ ಯುವಕರ ತಂಡ, ಜೋರಾಗಿ ನಗುತ್ತಾ, ಕಿರುಚಾಡುತ್ತ ಎಲ್ಲರಿಗೂ ತಮಾಷೆ ಮಾಡುತ್ತಾ, ಚೇಷ್ಟೆ ಮಾಡುತ್ತಾ ಇತ್ತು. 
ಚೆನ್ನಾಗಿ ಬೆಳಗ್ಗಿನ ತಿಂಡಿ ತಿಂದು ಹೊಟ್ಟೆ ತುಂಬಿಸಿ ಕೊಂಡು ಊರು ಸುತ್ತಲು, ನದಿಯಲ್ಲಿ ಈಜಾಡಿ ಮೋಜು ಮಸ್ತಿ ಮಾಡಲು ಹೊರಟು ಹೋಯಿತು.

     ಇತ್ತ, ಅಡಿಗೆ ಮನೆಯ ಉಪ್ಪರಿಗೆಯಲ್ಲಿ ದಟ್ಟವಾದ ಹೊಗೆ ಆವರಿಸುತ್ತಿದೆ ಶಾಂತಿರಾಜನಿಗೆ ಉಸಿರಾಡಲು ವಿಪರೀತ ಕಷ್ಟ ಆಗಿರಬಹುದು. ಕಣ್ಣನ್ನು ಬಿಗಿಯಾಗಿ ಮುಚ್ಚಿಕೊಂಡರೂ ಕೂಡ ಆ ಉರಿ ಬಿಸಿ ಹೊಗೆಯನ್ನೇ ಉಸಿರಾಡ ಬೇಕು. ಉಸಿರಾಡಲು ಅಲ್ಲಿ ಶುದ್ಧ ಗಾಳಿಯ ಲವಲೇಷವೂ ಇಲ್ಲ. ವಿಪರೀತ ಬೆವರಿರ ಬಹುದು, ಬಾರಿ ಸುಸ್ತಿನಿಂದ, ಕೆಮ್ಮುತ್ತಾ ಕೆಮ್ಮುತ್ತಾ ಪ್ರಾಣ ವೇದನೆ ತಡೆಯಲಾರದೆ "ಶಾಂತಿ" ಮೂರ್ಛೆ ಹೋಗಿಬಿಟ್ಟ.

ಹಾಗೆ ಎಷ್ಟು ಹೊತ್ತು ಕಳೆದುಹೋಯಿತೊ ಗೊತ್ತಿಲ್ಲ . ಉಸಿರು ಕಟ್ಟಿ ಮೂರ್ಛೆ ಹೋಗಿದ್ದಾನೆ.
ಹೀಗೆ ಕಮಲಕ್ಕ ಅಂದಿನ ಸನ್ನಿವೇಶವನ್ನು ವಿವರಿಸುತ್ತಿದ್ದಾರೆ.
    "ಆತನನ್ನು ಕಟ್ಟಿಹಾಕಿದ್ದು, ಎಲ್ಲರಿಗೂ ತಿಳಿದಿದ್ದರು, ಅಲ್ಲಿಯೇ ಬಿಟ್ಟಿದ್ದಾರೆ, ಅನ್ನುವ ವಿಷಯ ಮಧುಮಗಳು ಸೇರಿದಂತೆ, ಆ ಮನೆಯ ಮಹಿಳೆಯರಿಗೆ ಗೊತ್ತಿತ್ತೋ ಇಲ್ಲವೋ , ಆದರೆ ನನಗೆ ಮಾತ್ರ ಗೊತ್ತಿರಲಿಲ್ಲ ಅಕ್ಕಾ," ಎಂದು ಕಮಲಕ್ಕ ಅಳುತ್ತಾ ಕಥೆ ಹೇಳುತ್ತಿದ್ದಾರೆ.

( ಮುಂದುವರಿಯುತ್ತದೆ)

ಕಾಮೆಂಟ್‌ಗಳು

Popular Posts

ಬಾಳು ಮತ್ತು ಗೋಳು

ಸಾತ್ವಿಕ ಜೀವನದ ದಾರಿಯಲಿ ನಡೆಯಲಾರದೆ ಎಡವಿದವನು ಅಲೆಮಾರಿಯೋ...! ಹಣೆಬರಹವನು ಗೀಚಿಬಿಟ್ಟ ಭಗವಂತನು ಏನನ್ನೂ ಅರಿಯದ ಸೋಮಾರಿಯೋ....! ಜನಮ ನೀಡಿ ತಿದ್ದಿ ತೀಡಿ, ಸನ್ಮಾರ್ಗದಲಿ ನಡೆಯಲು ಪ್ರೇರೇಪಿಸಿದವರಿಗೆ ಅಭಾರಿಯೋ.!  ಮೌನವಾಗಿದ್ದು, ಜೀವಚ್ಛವದಂತಿರುವ, ಮುಗ್ದ ಮನಸ್ಸಿನ ಮೇಲೆ ದಬ್ಬಾಳಿಕೆಯ ಸವಾರಿಯೋ...! ಅಂಬೆಗಾಲಲಿ ಕಲಿತು, ದಾಪುಗಾಲಲಿ ನಡೆದು , ಕೋಲೂರಿ ನಡೆವ ತನಕ, ಬಾಳೆಂಬುದು ರಹದಾರಿಯೋ...!                                                        -ಮಿಥುನ್ ಜೈನ್

ಸರಳತೆ ಸೌಹಾರ್ದತೆ - ಮನುಜ ಕುಲಂ ತಾನೊಂದೆ ವಲಂ

ಮನುಜ ಕುಲಂ ತಾನೊಂದೆ ವಲಂ (ಸರಳ ಸೌಹಾರ್ದತೆ)  ಧರ್ಮಗಳೆಲ್ಲವು  ಒಳಿತನು ನೆನೆದರೆ ಜನಗಳ ಮದ್ಯೆ ದ್ವೇಷವೇಕೆ  !  ?  ಕರ್ಮ ಕಾಯಕವ ಮನವ ಬಯಸಿದರೆ ಪರರದು ಎಂಬ ಹಂಗೇಕೆ  ! ?  !ಪ! ಮಂದಿಯ ಮದ್ಯೆ ಮುನಿಸಿರದಿದ್ದರೆ  ಜಾತಿ ಜಾತಿ ನಡು ಬಿರುಕೇಕೆ  !  ?  ಒಂದಾಗಿದ್ದರೆ, ಎಲ್ಲಾ ಪಂಗಡಗಳು. ಏಕಿದೆ ನಡು ನಡು ಗೋಡೆಗಳು   ! ಪ! ಸಾರಿದರಲ್ಲವೇ  ಕವಿ ಕುವೆಂಪು. ವಿಶ್ವ ಮಾನವತೆಯ ಕಂಪು.  !  ಒಂದೇ,,ಜಾತಿ ಮತ, ದೇವರು ಎಂದರು.  ಗುರು ಶ್ರೀ ನಾರಾಯಣರು.   ! ಪ! ಇದ ಅರಿತರೆ ಬದುಕಿನ ಮಾರ್ಗ. ಬಾಳೊಂದು ನೆಮ್ಮದಿಯ ಸ್ವರ್ಗ. ! ಆದಿಕವಿ ಪಂಪನ ಕನ್ನಡ ಹೊನ್ನುಡಿ ಅಚಲ. ಮನುಜ ಕುಲ, ತಾನೊಂದೆ ವಲ  !ಪ!    ✍️ಎನ್. ಮಿಥುನ್ ಜೈನ್

ಅಮಾಯಕ ನೈಜ ಕಥೆ ( ಸಂಚಿಕೆ-೧೦)

 ಶಾಂತಿರಾಜನನ್ನು ಕಟ್ಟಿ ಹಾಕಿದ ಗೋಣಿ ಚೀಲವನ್ನು ಬಿಡಿಸಿ ನೋಡಿದಾಗ.. ಆ ದೃಶ್ಯ ನೋಡಿದ ಮನೆ ಮಂದಿಯೆಲ್ಲ ಒಮ್ಮೆಲೆ ಗಾಬರಿಗೊಂಡರು ಕೆಲವರು ಭಯದಿಂದ ಕಿರುಚಾಡಿದರು. ಶಾಂತಿರಾಜನ ದೇಹ ಮರುಗಟ್ಟಿ ಹೋಗಿತ್ತು. ಕೈ ಕಾಲುಗಳು ಜಡ್ಡುಗಟ್ಟಿ ಹೋಗಿತ್ತು.  ನರಕವೇದನೆಯನ್ನು ತಡೆಯಲಾರದೆ  ಅಲ್ಲಿಯೇ ಮಲ ಮೂತ್ರ ವಿಸರ್ಜನೆ ಆಗಿದೆ. ಯಾವುದೇ ಮಿಸುಕಾಟ ಇಲ್ಲ,   ಅವರಲ್ಲಿ ಯಾರೋ ಒಬ್ಬರು,  ಮೂಗಿನ ಬಳಿ ಕೈ ಹಿಡಿದರು, ಉಸಿರಾಡುತ್ತಿದ್ದಾನೆ.  ಮೂರ್ಛೆ ಹೋಗಿ ತುಂಬಾ ಹೊತ್ತಾಗಿದೆ. ಆದರೆ ಪ್ರಾಣ ಹೋಗಿಲ್ಲ.  ಮುಖಕ್ಕೆ ನೀರು ಚಿಮುಕಿಸಿದರು, ಆದರೆ ಪ್ರಜ್ಞೆ ಬರುತ್ತಿಲ್ಲ. ಹೀಗೆ ಕಮಲಕ್ಕ ನಡೆದ ಘಟನೆಯನ್ನು ವಿವರಿಸುತ್ತಿದ್ದಾರೆ,  ತನ್ನ ಕರುಳ ಕುಡಿಯ ಪ್ರಾಣ ವೇದನೆಯ ಕಥೆಯನ್ನು ಕಮಲಕ್ಕನ ಬಾಯಿಯಿಂದ ಕೇಳುತ್ತಿದ್ದಾಗ ಮರುದೇವಿಯವರು ಕೋಪ ಮತ್ತು ದುಃಖ್ಖದಿಂದ ಕುದಿಯುತ್ತಿದ್ದಾರೆ. ಕಮಲಕ್ಕ ಮತ್ತೆ ಆ ದುಃಖ್ಖದ ಕಥೆ ಯನ್ನು ಮುಂದುವರೆಸಿದರು. ಪುಂಡ ಯುವಕರ ಅಹಂಕಾರವೆಲ್ಲ ಇಳಿದುಹೋಗಿದೆ,  ಸಂಪೂರ್ಣ ಬೆವತು ಹೋಗಿದ್ದಾರೆ  ತಾವು ಮಾಡಿದ ಮಹಾ ಅಪರಾಧದ ಅರಿವಾಗಿ, ಬಹಳವಾಗಿ ನೊಂದು ಕೊಂಡರು. ಕೊನೆಗೆ ಯುವಕರೆಲ್ಲ ಒಂದು ನಿರ್ಧಾರಕ್ಕೆ ಬಂದರು. ಹೇಗಾದರು ಮಾಡಿ ಶಾಂತಿರಾಜನನ್ನು ಬದುಕಿಸ ಬೇಕು. ಕೂಡಲೇ,  ಯುವಕರೆಲ್ಲ ಸೇರಿ 'ಶಾಂತಿ'ಯನ್ನು ಭಾವಿ ಕಟ್ಟೆಯ ಬಳಿ ಕುಳ್ಳಿರಿಸಿ ತಲೆಗೆ ಕೊಡಪಾನದಿಂದ ನೀರ...