ವಿಷಯಕ್ಕೆ ಹೋಗಿ

ಅಮಾಯಕ ನೈಜ ಕಥೆ ( ಸಂಚಿಕೆ-೧೧)

 ತನ್ನ ಪ್ರೀತಿಯ ಪುತ್ರ.
ತನ್ನ ಕರುಳ ಕುಡಿ, ನಮ್ಮ ಕುಟುಂಬದ ವಾರಸುದಾರನಾಗಬೇಕಿದ್ದವನ ಕ್ರೂರ ಸಾವಿನ ಕಠೋರ ಸತ್ಯವನ್ನು ಅರಗಿಸಿಕೊಳ್ಳಲು ಮರುದೇವಿಯವರಿಗೆ ಸಾಧ್ಯವಾಗುತ್ತಿಲ್ಲ.

ತನ್ನ ಕಂದನ ಸಾವಿಗೆ ಕಾರಣರಾದವರು ಎಷ್ಟೇ ದೊಡ್ಡ ವ್ಯಕ್ತಿಗಳಾದರು ಅವರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ನಿರ್ಧರಿಸಿದರು. ಈ ಸಾವಿನ ಬಗ್ಗೆ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಸೂಚಿಸಬೇಕು ಎಂದು ಜಿಲ್ಲಾ ಮ್ಯಾಜಿಸ್ಟೇಟರ್ ಅವರಿಗೆ ಒಂದು ಸುದೀರ್ಘವಾದ ದೂರು ಪತ್ರ ಬರೆದು ರೆಡಿ ಮಾಡಿದರು.

ನಾಳೆಯ ದಿನ ಮಂಗಳೂರಿಗೆ ಮ್ಯಾಜಿಸ್ಟೇಟರ್ ಕಛೇರಿಗೆ ಹೋಗಿ ಅವರನ್ನು ಮುಖತಃ ಭೇಟಿಯಾಗಿ, ಲಿಖಿತವಾಗಿ ಬರೆದ ದೂರನ್ನು ಕೊಡಬೇಕು ಎಂದು ನಿರ್ಧರಿಸಿದರು.

ಮರುದಿನ ತಾನೊಬ್ಬಳೇ ಹೋಗುವ ಬದಲು ತನ್ನ ಅಕ್ಕನ ಮಗ ದೇವರಾಜ ಬಂಗನನ್ನು ಜೊತೆಗೆ ಕರೆದುಕೊಂಡು ಹೋದರೆ ಅನುಕೂಲ ಆಗುತ್ತದೆ ಎಂದು ಕೊಂಡರು. 

ಮರುದೇವಿಯವರು ಮನೆಯಿಂದ ಹೊರಟು ಹೊಸ್ತಿಲು ದಾಟಿದ ಕೂಡಲೇ, ಆಕಸ್ಮಿಕ ಎಂಬಂತೆ ದೇವರಾಜ ಬಂಗನೇ ಎದುರುಗಡೆ ಬರುತ್ತಿದ್ದಾನೆ.
ಮತ್ತೆ ಮನೆಗೆ ಬಂದು, ದೇವರಾಜನಿಗೆ ಕಾಫಿ ಕೊಟ್ಟು ಉಪಚರಿಸಿದರು 

ಮರುದೇವಿಯವರು , ತಾನು ಹೊರಟ ವಿಷಯವನ್ನು ತಿಳಿಸಿ. "ನಿನ್ನನ್ನೇ ಹುಡುಕುತ್ತಾ ಹೊರಟೆ, ನೀನೆ ಎದುರು ಸಿಕ್ಕಿದೆ, ಬಾ ಹೋಗಿ ಬರೋಣ, ದೇವರಾಜ" ಎಂದರು.

ಆಗ ದೇವರಾಜರು, " ಚಿಕ್ಕಮ್ಮ ನಾನು ಬಂದ ವಿಷಯವೇ ಬೇರೆ, ಒಂದು ಶುಭ ಸುದ್ದಿಯನ್ನು ತಂದಿದ್ದೇನೆ. ಈ ಸಮಯದಲ್ಲಿ ನೀವು ಆಗದ ಹೋಗದ ವಿಷಯವನ್ನು ಮಾತನಾಡುತ್ತಿರಲ್ವಾ. 
ಆ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿ ಹೋರಾಟ ಮಾಡುತ್ತಾ ಕುಳಿತರೆ, ಸತ್ತವನು ಮತ್ತೆ ಬದುಕಿ ಬರುತ್ತಾನೆಯೇ..?
ನಾನು ಬಂದಿದ್ದು ಹೆಣ್ಣು ಮಕ್ಕಳ ನೆಂಟಸ್ತಿಕೆ ಬಗ್ಗೆ ಮಾತನಾಡಲು ಸರಸ್ವತಿಗು, ಸುನಂದಳಿಗು, ಇಬ್ಬರಿಗೂ ಒಳ್ಳೆಯ ಕಡೆಯ ಎರಡು ಸಂಬಂಧಗಳಿವೆ." ಎಂದರು
ಆಗ ಮರುದೇವಿಯವರು, "ನೋಡು ದೇವರಾಜ ಮಕ್ಕಳಿಗೆ ಮದುವೆ ಮಾಡುವುದು ಇದ್ದೇ ಇದೆ. ಹಾಗಂತ ನಮಗೆ ನ್ಯಾಯ ಸಿಗುವುದು ಬೇಡವೇ ?
ನಮ್ಮ ಶಾಂತಿಯ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗುವುದು ಬೇಡವೇ ? " ಎಂದರು.

ಆಗ ದೇವರಾಜರು, " ನೋಡಿ ಚಿಕ್ಕಮ್ಮ ಪ್ರಾಯಕ್ಕೆ ಬಂದ ಹುಡುಗಿಯರಿಗೆ ಮದುವೆ ಮಾಡುವುದು ಬಿಟ್ಟು ಕಾನೂನು ಹೋರಾಟಕ್ಕೆ ಇಳಿದರೆ ಏನು ಪ್ರಯೋಜನ. ?
ಸತ್ತವನೇನು ಮತ್ತೆ ಬದುಕಿ ಬರುತ್ತಾನೆಯೇ ? " ಎಂದರು.

ಆಗ ಮರುದೇವಿಯವರು " ಹಾಗಲ್ಲ ದೇವರಾಜ, ಈ ಕಾಲ ಕಳೆದು ಹೋದರೆ, ಮತ್ತೆ ವಿಳಂಬವಾಗಿ ದೂರು ಕೊಟ್ಟರೆ, ಪ್ರಯೋಜನವಾಗುವುದಿಲ್ಲ. ಅಲ್ವಾ " ಎಂದರು.

ಆಗ ದೇವರಾಜ ಸ್ವಲ್ಪ ಕೋಪಗೊಂಡು, " ನೀವು ದೂರು ಕೊಟ್ಟು ಅವರಿಗೆ ಶಿಕ್ಷೆ ಆದರು ಸತ್ತವನೇನು ಮತ್ತೆ ಬದುಕಿ ಬರುವುದಿಲ್ಲ. ಅವನ ಆಯುಷ್ಯ ಅಷ್ಟೆ ಇದ್ದದ್ದು. ಹಾಗೆ ಸತ್ತು ಹೋದ. ಚಿಕ್ಕಮ್ಮ, ನಿಮಗೆ, ಸತ್ತವನಿಗೆ ನ್ಯಾಯ ದೊರಕಿಸುವುದು ಮುಖ್ಯವೋ, ಅಥವಾ ಬದುಕಿರುವವರ ಬದುಕು ರೂಪಿಸುವುದು ಮುಖ್ಯವೋ. ನಿರ್ಧರಿಸಿ " ಎಂದು ಹೇಳಿ ಹೊರಡಲು ಎದ್ದು ನಿಂತರು.

ಆಗ ಮರುದೇವಿಯವರು " ನಿಲ್ಲು ದೇವರಾಜ" ಎಂದರು 
ತನ್ನ ಕೈ ಚೀಲದಿಂದ ಮ್ಯಾಜಿಸ್ಟರೆಟ್ಗೆ ದೂರು ಬರೆದ ದೂರು ಪತ್ರವನ್ನು ಹೊರ ತೆಗೆದವರೇ, ಅದನ್ನು ಹರಿದು ಹಾಕಿದರು.
ದುಃಖ್ಖ ಮತ್ತು ಹತಾಶೆಯಿಂದ ಅವರ ಕಣ್ಣಿನಿಂದ ನೀರಿಳಿಯುತಿತ್ತು. ಬಿಕ್ಕಿ ಬಿಕ್ಕಿ ಅತ್ತರು.

ಮರುದೇವಿ ಅಮ್ಮನು 
ಜೀವನದಲ್ಲಿ ಎರಡನೇ ಬಾರೀ ಪರಿಸ್ಥಿತಿಯೊಂದಿಗೆ ಸೋಲಬೇಕಾಯಿತು.

(ಮುಂದುವರಿಯುತ್ತದೆ)

ಕಾಮೆಂಟ್‌ಗಳು

Popular Posts

ಬಾಳು ಮತ್ತು ಗೋಳು

ಸಾತ್ವಿಕ ಜೀವನದ ದಾರಿಯಲಿ ನಡೆಯಲಾರದೆ ಎಡವಿದವನು ಅಲೆಮಾರಿಯೋ...! ಹಣೆಬರಹವನು ಗೀಚಿಬಿಟ್ಟ ಭಗವಂತನು ಏನನ್ನೂ ಅರಿಯದ ಸೋಮಾರಿಯೋ....! ಜನಮ ನೀಡಿ ತಿದ್ದಿ ತೀಡಿ, ಸನ್ಮಾರ್ಗದಲಿ ನಡೆಯಲು ಪ್ರೇರೇಪಿಸಿದವರಿಗೆ ಅಭಾರಿಯೋ.!  ಮೌನವಾಗಿದ್ದು, ಜೀವಚ್ಛವದಂತಿರುವ, ಮುಗ್ದ ಮನಸ್ಸಿನ ಮೇಲೆ ದಬ್ಬಾಳಿಕೆಯ ಸವಾರಿಯೋ...! ಅಂಬೆಗಾಲಲಿ ಕಲಿತು, ದಾಪುಗಾಲಲಿ ನಡೆದು , ಕೋಲೂರಿ ನಡೆವ ತನಕ, ಬಾಳೆಂಬುದು ರಹದಾರಿಯೋ...!                                                        -ಮಿಥುನ್ ಜೈನ್

ಸರಳತೆ ಸೌಹಾರ್ದತೆ - ಮನುಜ ಕುಲಂ ತಾನೊಂದೆ ವಲಂ

ಮನುಜ ಕುಲಂ ತಾನೊಂದೆ ವಲಂ (ಸರಳ ಸೌಹಾರ್ದತೆ)  ಧರ್ಮಗಳೆಲ್ಲವು  ಒಳಿತನು ನೆನೆದರೆ ಜನಗಳ ಮದ್ಯೆ ದ್ವೇಷವೇಕೆ  !  ?  ಕರ್ಮ ಕಾಯಕವ ಮನವ ಬಯಸಿದರೆ ಪರರದು ಎಂಬ ಹಂಗೇಕೆ  ! ?  !ಪ! ಮಂದಿಯ ಮದ್ಯೆ ಮುನಿಸಿರದಿದ್ದರೆ  ಜಾತಿ ಜಾತಿ ನಡು ಬಿರುಕೇಕೆ  !  ?  ಒಂದಾಗಿದ್ದರೆ, ಎಲ್ಲಾ ಪಂಗಡಗಳು. ಏಕಿದೆ ನಡು ನಡು ಗೋಡೆಗಳು   ! ಪ! ಸಾರಿದರಲ್ಲವೇ  ಕವಿ ಕುವೆಂಪು. ವಿಶ್ವ ಮಾನವತೆಯ ಕಂಪು.  !  ಒಂದೇ,,ಜಾತಿ ಮತ, ದೇವರು ಎಂದರು.  ಗುರು ಶ್ರೀ ನಾರಾಯಣರು.   ! ಪ! ಇದ ಅರಿತರೆ ಬದುಕಿನ ಮಾರ್ಗ. ಬಾಳೊಂದು ನೆಮ್ಮದಿಯ ಸ್ವರ್ಗ. ! ಆದಿಕವಿ ಪಂಪನ ಕನ್ನಡ ಹೊನ್ನುಡಿ ಅಚಲ. ಮನುಜ ಕುಲ, ತಾನೊಂದೆ ವಲ  !ಪ!    ✍️ಎನ್. ಮಿಥುನ್ ಜೈನ್

ಅಮಾಯಕ ನೈಜ ಕಥೆ ( ಸಂಚಿಕೆ-೧೦)

 ಶಾಂತಿರಾಜನನ್ನು ಕಟ್ಟಿ ಹಾಕಿದ ಗೋಣಿ ಚೀಲವನ್ನು ಬಿಡಿಸಿ ನೋಡಿದಾಗ.. ಆ ದೃಶ್ಯ ನೋಡಿದ ಮನೆ ಮಂದಿಯೆಲ್ಲ ಒಮ್ಮೆಲೆ ಗಾಬರಿಗೊಂಡರು ಕೆಲವರು ಭಯದಿಂದ ಕಿರುಚಾಡಿದರು. ಶಾಂತಿರಾಜನ ದೇಹ ಮರುಗಟ್ಟಿ ಹೋಗಿತ್ತು. ಕೈ ಕಾಲುಗಳು ಜಡ್ಡುಗಟ್ಟಿ ಹೋಗಿತ್ತು.  ನರಕವೇದನೆಯನ್ನು ತಡೆಯಲಾರದೆ  ಅಲ್ಲಿಯೇ ಮಲ ಮೂತ್ರ ವಿಸರ್ಜನೆ ಆಗಿದೆ. ಯಾವುದೇ ಮಿಸುಕಾಟ ಇಲ್ಲ,   ಅವರಲ್ಲಿ ಯಾರೋ ಒಬ್ಬರು,  ಮೂಗಿನ ಬಳಿ ಕೈ ಹಿಡಿದರು, ಉಸಿರಾಡುತ್ತಿದ್ದಾನೆ.  ಮೂರ್ಛೆ ಹೋಗಿ ತುಂಬಾ ಹೊತ್ತಾಗಿದೆ. ಆದರೆ ಪ್ರಾಣ ಹೋಗಿಲ್ಲ.  ಮುಖಕ್ಕೆ ನೀರು ಚಿಮುಕಿಸಿದರು, ಆದರೆ ಪ್ರಜ್ಞೆ ಬರುತ್ತಿಲ್ಲ. ಹೀಗೆ ಕಮಲಕ್ಕ ನಡೆದ ಘಟನೆಯನ್ನು ವಿವರಿಸುತ್ತಿದ್ದಾರೆ,  ತನ್ನ ಕರುಳ ಕುಡಿಯ ಪ್ರಾಣ ವೇದನೆಯ ಕಥೆಯನ್ನು ಕಮಲಕ್ಕನ ಬಾಯಿಯಿಂದ ಕೇಳುತ್ತಿದ್ದಾಗ ಮರುದೇವಿಯವರು ಕೋಪ ಮತ್ತು ದುಃಖ್ಖದಿಂದ ಕುದಿಯುತ್ತಿದ್ದಾರೆ. ಕಮಲಕ್ಕ ಮತ್ತೆ ಆ ದುಃಖ್ಖದ ಕಥೆ ಯನ್ನು ಮುಂದುವರೆಸಿದರು. ಪುಂಡ ಯುವಕರ ಅಹಂಕಾರವೆಲ್ಲ ಇಳಿದುಹೋಗಿದೆ,  ಸಂಪೂರ್ಣ ಬೆವತು ಹೋಗಿದ್ದಾರೆ  ತಾವು ಮಾಡಿದ ಮಹಾ ಅಪರಾಧದ ಅರಿವಾಗಿ, ಬಹಳವಾಗಿ ನೊಂದು ಕೊಂಡರು. ಕೊನೆಗೆ ಯುವಕರೆಲ್ಲ ಒಂದು ನಿರ್ಧಾರಕ್ಕೆ ಬಂದರು. ಹೇಗಾದರು ಮಾಡಿ ಶಾಂತಿರಾಜನನ್ನು ಬದುಕಿಸ ಬೇಕು. ಕೂಡಲೇ,  ಯುವಕರೆಲ್ಲ ಸೇರಿ 'ಶಾಂತಿ'ಯನ್ನು ಭಾವಿ ಕಟ್ಟೆಯ ಬಳಿ ಕುಳ್ಳಿರಿಸಿ ತಲೆಗೆ ಕೊಡಪಾನದಿಂದ ನೀರ...