ವಿಷಯಕ್ಕೆ ಹೋಗಿ

ಅಮಾಯಕ ನೈಜ ಕಥೆ ( ಸಂಚಿಕೆ-೦೨)

ಮರುದೇವಿಯಮ್ಮನವರು ತನ್ನ ಮಕ್ಕಳೊಂದಿಗೆ ಮನೆ ಬಿಟ್ಟು ಬಂದವರು ಸೇರಿಕೊಂಡಿದ್ದು. ತಮ್ಮದೇ ದೂರದ ಸಂಬಂದಿಕರಾದ, ಹಾಗೂ ಬಾಲ್ಯದಲ್ಲಿ ತಮ್ಮ ಮನೆಯಲ್ಲೇ ವಿದ್ಯಾಭ್ಯಾಸ ಮಾಡುತಿದ್ದ, ಬೊಳ್ಳಾರ್ ಚಂದಯ್ಯ ಕೊಟ್ಟಾರಿಯವರ ಮನೆಗೆ, ಕೆಲವಾರು ದಿನಗಳು ಕಳೆದು ಹೋದವು. ಇವರು ಮಾನಸಿಕವಾಗಿಯೂ ದೈಹಿಕವಾಗಿಯು 
ಸ್ವಲ್ಪ ಸುಧಾರಿಸಿಕೊಂಡರು.

ಈ ಮದ್ಯೆ, ಒಂದು ದಿನ ಇವರ ಅಮ್ಟುರಿನ ಮನೆಯ ಕಡೆಯ ಒಕ್ಕಲಿನವನೊಬ್ಬ, ಇವರಿಗೆ ಇವರ ತಮ್ಮ ಹಲ್ಲೆ ನಡೆಸಿದ ವಿಷಯ ತಿಳಿದು, ಇವರಿದ್ದ ಮನೆಯನ್ನು ಹುಡುಕಿಕೊಂಡು ಬೊಳ್ಳಾರಿನ ಮನೆಗೆ ಬಂದಿದ್ದ.    ಈತ ಮತ್ತು ಮರುದೇವಿಯವರ ತಮ್ಮ ಪಟೇಲ ನೇಮಿರಾಜರು, ಇವರಿಬ್ಬರೂ ಬದ್ದ ವೈರಿಗಳು.  ಈತ ಬಂದವನು ನಡೆದ ಗಲಾಟೆಯ ಬಗ್ಗೆ ಎಲ್ಲಾ ವಿಚಾರಿಸಿದ ನಂತರ, "ನೀವು ಒಂದು ಮಾತು ಹೇಳಿ ಅಕ್ಕಾ, ಪಟೇಲರ ಕೈ ಕಾಲು ನಾವು ಮುರಿಯುತ್ತೇವೆ" ಎಂದು ಬಿಟ್ಟ
ಆಗ ಮರುದೇವಿಯವರು  ಒಂದು ಕ್ಷಣ ಮೌನವಾದರು. ತುಂಬಾ ಆಲೋಚಿಸಲು ಪ್ರಾರಂಭಿಸಿದರು.       ಆಗ ಕೊಟ್ಟಾರಿಯವರ ತಾಯಿ   "ಬೇಡ ಮರುದೇವಿ, ಅಂತಹ ನಿರ್ಧಾರಕ್ಕೆ ಬರಬೇಡ.  ನಿನಗಿಬ್ಬರು ಹೆಣ್ಣು ಮಕ್ಕಳು ಇದ್ದಾರೆ "  ಅವರ ಭವಿಷ್ಯದ ಬಗ್ಗೆ ಯೋಚಿಸು ಎಂದರು.
ಆಗ 'ಮರುದೇವಿ ಅಮ್ಮ' ಒಕ್ಕಲಿನವನಲ್ಲಿ "ನನಗಾದ ನೋವು ನಾನು ಎದುರಿಸುತ್ತೇನೆ.  ಸದ್ಯಕ್ಕೆ ನಿನ್ನ ಯಾವುದೇ ಸಹಾಯ ಬೇಕಾಗಿಲ್ಲ" ಎಂದರು.
    ಆಗ ಆ ಕ್ಷಣಕ್ಕೆ ಮರುದೇವಿ ಅಮ್ಮ ಸುಮ್ಮನಾದರೂ ತಮ್ಮನ ಬಗ್ಗೆ , ಕೋಪ, ದುಃಖ್ಖ ಹತಾಶೆಗಳಿಂದ ಮನಸ್ಸು ಕುದಿಯುತ್ತಿತ್ತು.

   ದಿನಗಳುರುಳುತ್ತಿದ್ದವು,,
ಇನ್ನು ತನ್ನ ಮತ್ತು ತನ್ನಿಬ್ಬರು ಮಕ್ಕಳ ಜೀವನ ನಡೆಸಲು ದಾರಿ ಹುಡುಕಬೇಕು.  ಅಸ್ತಿಯ ಪಾಲಿಗಾಗಿ ಈ ಸಂದರ್ಭದಲ್ಲಿ ತಮ್ಮ ಪಟೇಲ ನೇಮಿರಾಜನೊಡನೆ ಹೋರಾಟ ನಡೆಸುವುದು ಅಸಾಧ್ಯ.
ಹಾಗಂತ ಇನ್ನೊಬರ ಮನೆಯಲ್ಲಿ ಹೀಗೆ ಇರಲು ಸಾಧ್ಯವಿಲ್ಲ.
ನಮ್ಮದು ಸ್ವಾಭಿಮಾನದಿಂದ ಬದುಕಿದ ಕುಟುಂಬ.
ಮುಂದೆ ಜೀವನ ನಡೆಸಲು ಏನು ಮಾಡುವುದು ಎಂಬ ಚಿಂತೆ ಪದೇ ಪದೇ ಇವರನ್ನು ಕಾಡುತಿತ್ತು.
    ಇದ್ದ ಒಬ್ಬ ಮಗನೂ ದೂರವಾಗಿದ್ದ.  ತನ್ನ ತಾಯಿ ಮತ್ತು ಸೋದರ ಮಾವನ ನಡುವಿನ ಗಲಾಟೆಯಿಂದ ಬೇಸತ್ತ, ಮಗ 'ಶಾಂತಿರಾಜ' ಊರು ಬಿಟ್ಟು ದೂರ ಹೊರಟು ಹೋಗಿದ್ದರು.
ಯಾರಲ್ಲಿಯೂ ಹೇಳದೆ ಮಡಿಕೇರಿ ಕಡೆ ಕೆಲಸ ಹುಡುಕಿಕೊಂಡು ಹೋಗಿ.   ಮಡಿಕೇರಿಯ ಆ ಕಾಲದ ಪ್ರಸಿದ್ಧ ಶ್ರೀಮಂತ ಮಹಿಳೆ, ಕಾಫಿ ಎಸ್ಟೇಟ್ ಮಾಲಕಿ "ಸಾಕಮ್ಮ" ಅವರ ತೋಟದಲ್ಲಿ ರೈಟರ್ ಆಗಿ ಸೇರಿ ಕೊಂಡಿದ್ದರು.   ಈ ವಿಷಯ, ಕಾಫಿ ಎಸ್ಟೇಟ್ ಗೆ ಕೆಲಸಕ್ಕಾಗಿ ಈ ಕಡೆಯಿಂದ ಹೋಗುತ್ತಿದ್ದ ಕಾರ್ಮಿಕರಿಂದ ಮರುದೇವಿಯವರಿಗೆ ತಿಳಿಯಿತು.
ಇರಲಿ ಗಂಡು ಮಗ ಎಲ್ಲಾದರೂ ಬದುಕಿ ಕೊಳ್ಳಲಿ. ಎಂದು ಸಮಾಧಾನ ಮಾಡಿಕೊಂಡರು.

ಮರುದೇವಿಯಮ್ಮ ತನ್ನ ಮತ್ತು ಇಬ್ಬರು ಹೆಣ್ಣು ಮಕ್ಕಳ ಭವಿಷ್ಯ ಮತ್ತು ಜೀವನೋಪಾಯಕ್ಕೆ ಏನಾದರೂ ಮಾಡಬೇಕು ಎಂದು ಕೊಂಡರು.
 ಹೀಗೆ ಹೆಚ್ಚು ದಿನ ಕೊಟ್ಟಾರಿಯವರ ಮನೆಯಲ್ಲಿ ಇರಲು ಮನಸ್ಸು ಒಪ್ಪಲಿಲ್ಲ. ಒಂದು ದಿನ ಕೊಟ್ಟಾರಿಯವರಿಗೆ ಮತ್ತು ಅವರ ಮನೆಯವರಿಗೆ ತಿಳಿಸಿ, ಅವರುಗಳನ್ನು ಒಪ್ಪಿಸಿ.   ತನ್ನಿಬ್ಬರು ಮಕ್ಕಳೊಡನೆ  ಅಲ್ಲಿಂದ ಹೊರಟು ಹೋದರು.

(ಮುಂದುವರಿಯುತ್ತದೆ)

ಕಾಮೆಂಟ್‌ಗಳು

Popular Posts

ಬಾಳು ಮತ್ತು ಗೋಳು

ಸಾತ್ವಿಕ ಜೀವನದ ದಾರಿಯಲಿ ನಡೆಯಲಾರದೆ ಎಡವಿದವನು ಅಲೆಮಾರಿಯೋ...! ಹಣೆಬರಹವನು ಗೀಚಿಬಿಟ್ಟ ಭಗವಂತನು ಏನನ್ನೂ ಅರಿಯದ ಸೋಮಾರಿಯೋ....! ಜನಮ ನೀಡಿ ತಿದ್ದಿ ತೀಡಿ, ಸನ್ಮಾರ್ಗದಲಿ ನಡೆಯಲು ಪ್ರೇರೇಪಿಸಿದವರಿಗೆ ಅಭಾರಿಯೋ.!  ಮೌನವಾಗಿದ್ದು, ಜೀವಚ್ಛವದಂತಿರುವ, ಮುಗ್ದ ಮನಸ್ಸಿನ ಮೇಲೆ ದಬ್ಬಾಳಿಕೆಯ ಸವಾರಿಯೋ...! ಅಂಬೆಗಾಲಲಿ ಕಲಿತು, ದಾಪುಗಾಲಲಿ ನಡೆದು , ಕೋಲೂರಿ ನಡೆವ ತನಕ, ಬಾಳೆಂಬುದು ರಹದಾರಿಯೋ...!                                                        -ಮಿಥುನ್ ಜೈನ್

ಸರಳತೆ ಸೌಹಾರ್ದತೆ - ಮನುಜ ಕುಲಂ ತಾನೊಂದೆ ವಲಂ

ಮನುಜ ಕುಲಂ ತಾನೊಂದೆ ವಲಂ (ಸರಳ ಸೌಹಾರ್ದತೆ)  ಧರ್ಮಗಳೆಲ್ಲವು  ಒಳಿತನು ನೆನೆದರೆ ಜನಗಳ ಮದ್ಯೆ ದ್ವೇಷವೇಕೆ  !  ?  ಕರ್ಮ ಕಾಯಕವ ಮನವ ಬಯಸಿದರೆ ಪರರದು ಎಂಬ ಹಂಗೇಕೆ  ! ?  !ಪ! ಮಂದಿಯ ಮದ್ಯೆ ಮುನಿಸಿರದಿದ್ದರೆ  ಜಾತಿ ಜಾತಿ ನಡು ಬಿರುಕೇಕೆ  !  ?  ಒಂದಾಗಿದ್ದರೆ, ಎಲ್ಲಾ ಪಂಗಡಗಳು. ಏಕಿದೆ ನಡು ನಡು ಗೋಡೆಗಳು   ! ಪ! ಸಾರಿದರಲ್ಲವೇ  ಕವಿ ಕುವೆಂಪು. ವಿಶ್ವ ಮಾನವತೆಯ ಕಂಪು.  !  ಒಂದೇ,,ಜಾತಿ ಮತ, ದೇವರು ಎಂದರು.  ಗುರು ಶ್ರೀ ನಾರಾಯಣರು.   ! ಪ! ಇದ ಅರಿತರೆ ಬದುಕಿನ ಮಾರ್ಗ. ಬಾಳೊಂದು ನೆಮ್ಮದಿಯ ಸ್ವರ್ಗ. ! ಆದಿಕವಿ ಪಂಪನ ಕನ್ನಡ ಹೊನ್ನುಡಿ ಅಚಲ. ಮನುಜ ಕುಲ, ತಾನೊಂದೆ ವಲ  !ಪ!    ✍️ಎನ್. ಮಿಥುನ್ ಜೈನ್

ಅಮಾಯಕ ನೈಜ ಕಥೆ ( ಸಂಚಿಕೆ-೧೦)

 ಶಾಂತಿರಾಜನನ್ನು ಕಟ್ಟಿ ಹಾಕಿದ ಗೋಣಿ ಚೀಲವನ್ನು ಬಿಡಿಸಿ ನೋಡಿದಾಗ.. ಆ ದೃಶ್ಯ ನೋಡಿದ ಮನೆ ಮಂದಿಯೆಲ್ಲ ಒಮ್ಮೆಲೆ ಗಾಬರಿಗೊಂಡರು ಕೆಲವರು ಭಯದಿಂದ ಕಿರುಚಾಡಿದರು. ಶಾಂತಿರಾಜನ ದೇಹ ಮರುಗಟ್ಟಿ ಹೋಗಿತ್ತು. ಕೈ ಕಾಲುಗಳು ಜಡ್ಡುಗಟ್ಟಿ ಹೋಗಿತ್ತು.  ನರಕವೇದನೆಯನ್ನು ತಡೆಯಲಾರದೆ  ಅಲ್ಲಿಯೇ ಮಲ ಮೂತ್ರ ವಿಸರ್ಜನೆ ಆಗಿದೆ. ಯಾವುದೇ ಮಿಸುಕಾಟ ಇಲ್ಲ,   ಅವರಲ್ಲಿ ಯಾರೋ ಒಬ್ಬರು,  ಮೂಗಿನ ಬಳಿ ಕೈ ಹಿಡಿದರು, ಉಸಿರಾಡುತ್ತಿದ್ದಾನೆ.  ಮೂರ್ಛೆ ಹೋಗಿ ತುಂಬಾ ಹೊತ್ತಾಗಿದೆ. ಆದರೆ ಪ್ರಾಣ ಹೋಗಿಲ್ಲ.  ಮುಖಕ್ಕೆ ನೀರು ಚಿಮುಕಿಸಿದರು, ಆದರೆ ಪ್ರಜ್ಞೆ ಬರುತ್ತಿಲ್ಲ. ಹೀಗೆ ಕಮಲಕ್ಕ ನಡೆದ ಘಟನೆಯನ್ನು ವಿವರಿಸುತ್ತಿದ್ದಾರೆ,  ತನ್ನ ಕರುಳ ಕುಡಿಯ ಪ್ರಾಣ ವೇದನೆಯ ಕಥೆಯನ್ನು ಕಮಲಕ್ಕನ ಬಾಯಿಯಿಂದ ಕೇಳುತ್ತಿದ್ದಾಗ ಮರುದೇವಿಯವರು ಕೋಪ ಮತ್ತು ದುಃಖ್ಖದಿಂದ ಕುದಿಯುತ್ತಿದ್ದಾರೆ. ಕಮಲಕ್ಕ ಮತ್ತೆ ಆ ದುಃಖ್ಖದ ಕಥೆ ಯನ್ನು ಮುಂದುವರೆಸಿದರು. ಪುಂಡ ಯುವಕರ ಅಹಂಕಾರವೆಲ್ಲ ಇಳಿದುಹೋಗಿದೆ,  ಸಂಪೂರ್ಣ ಬೆವತು ಹೋಗಿದ್ದಾರೆ  ತಾವು ಮಾಡಿದ ಮಹಾ ಅಪರಾಧದ ಅರಿವಾಗಿ, ಬಹಳವಾಗಿ ನೊಂದು ಕೊಂಡರು. ಕೊನೆಗೆ ಯುವಕರೆಲ್ಲ ಒಂದು ನಿರ್ಧಾರಕ್ಕೆ ಬಂದರು. ಹೇಗಾದರು ಮಾಡಿ ಶಾಂತಿರಾಜನನ್ನು ಬದುಕಿಸ ಬೇಕು. ಕೂಡಲೇ,  ಯುವಕರೆಲ್ಲ ಸೇರಿ 'ಶಾಂತಿ'ಯನ್ನು ಭಾವಿ ಕಟ್ಟೆಯ ಬಳಿ ಕುಳ್ಳಿರಿಸಿ ತಲೆಗೆ ಕೊಡಪಾನದಿಂದ ನೀರ...