ವಿಷಯಕ್ಕೆ ಹೋಗಿ

ಅಮಾಯಕ ನೈಜ ಕಥೆ ( ಸಂಚಿಕೆ-೦೯)

"ಶಾಂತಿ ರಾಜ," ಮೂರ್ಛೆ ಹೋಗುವ ಮೊದಲು ಅತಿಯಾದ ಪ್ರಾಣ ವೇದನೆಯಿಂದ ನರಳಿರಬಹುದು. ಆದರೆ ಈಗ ಅದನ್ನು ಕಲ್ಪಿಸಿಕೊಳ್ಳುವಾಗ ತಾಯಿ ಮರುದೇವಿ ಅಮ್ಮ ದುಃಖ್ಖ ಮತ್ತು ಕೋಪದಿಂದ ನಡುಗುತ್ತಿದ್ದಾರೆ. 

 ಉಸಿರಾಡಲು ಗಾಳಿಯೇ ಇಲ್ಲ, ಹೊಗೆ ಮಿಶ್ರಿತ ಗಾಳಿಯನ್ನು ಉಸಿರಾಡುತ್ತಿದ್ದಾನೆ. ಆದರೆ ಪ್ರಾಣ ಹೋಗಿಲ್ಲ. ಕ್ರಮೇಣ ಮೂರ್ಛೆ ತಪ್ಪಿ ಹೋಗಿರ ಬಹುದು.
 ಏನು ತಪ್ಪು ಮಾಡದ "ಅಮಾಯಕ" ಯುವಕನೊಬ್ಬ ಪುಂಡ ಪೋಕರಿ ಹುಡುಗರ ಹುಚ್ಚಾಟಕ್ಕೆ ಬಲಿಯಾಗುತ್ತಿದ್ದಾನೆ.

  ಯುವಕರ ಗುಂಪು ಊರೆಲ್ಲ ಸುತ್ತಾಡಿ, ಎಲ್ಲಾ ಕಡೆ ಕೀಟಲೆ ಮಾಡಿ. ಜುಗರಿಯಾಟ ಆಡಿ, ನದಿಯಲ್ಲಿ ಈಜಾಡಿ, ಚೆನ್ನಾಗಿ ಹಸಿವಾದಾಗ ಮದ್ಯಾಹ್ನದ ಊಟದ ಸಮಯ ಸುಮಾರು ಒಂದು ಗಂಟೆಯ ಹೊತ್ತಿಗೆ ಮನೆಗೆ ಬಂದರು.
 ಮನೆಯ ಹೆಂಗಸರೆಲ್ಲ ಸೇರಿ ಊಟಕ್ಕೆ ಬಗೆ ಬಗೆಯ ಮೃಷ್ಟಾನ್ಹ ಭೋಜನ ತಯಾರಿ ಮಾಡಿದ್ದರು. ಮನೆಯಲ್ಲಿ ನೆಂಟರಿಷ್ಟರು ಮಕ್ಕಳು ಎಲ್ಲಾ ಸೇರಿ ತುಂಬಾ ಮಂದಿ ಇದ್ದಾರೆ. ಎಲ್ಲರು ಊಟ ಮಾಡಿದರು. ಯುವಕರು ತುಂಬಾ ಗಮ್ಮತ್ತಿನಿಂದ ಊಟ ಮಾಡಲು ಪ್ರಾರಂಭಿಸಿದರು. ಸುಮಾರು ಅರ್ಧ ಊಟ ಮಾಡಿರ ಬಹುದು, ಆಗ ಯಾರೋ ಒಬ್ಬರು "ನಿಮ್ಮ ಕುರುಂಟು "ಶಾಂತಿ" ಎಲ್ಲಿ" ? ಎಂದು ಕೇಳಿದರು.

ಎಲ್ಲರು ಒಂದು ಕ್ಷಣ ಮೌನವಾದರು. ! 

ಊಟಕ್ಕೆ ಕುಳಿತ ಯುವಕರಿಗೆ ಒಮ್ಮೆಲೆ ಗಾಬರಿಯಾಯಿತು. ಬೆಳಿಗ್ಗೆ ತಾವು ಮಾಡಿದ ತಮಾಷೆ, ಹಾಗೂ ಶಾಂತಿಯನ್ನು ಗೋಣಿಚೀಲದಲ್ಲಿ ಕಟ್ಟಿ ಅಡಿಗೆ ಕೋಣೆಯ ಉಪ್ಪರಿಗೆಯಲ್ಲಿ ಹಾಕಿದ್ದು ಎಲ್ಲಾ ಒಮ್ಮೆಲೇ ನೆನಪಾಯಿತು. ಎಲ್ಲರು ಗಾಬರಿಗೊಂಡು ಅರ್ಧ ಊಟದಿಂದ ಎದ್ದು ಮಾಳಿಗೆಗೆ ಶಾಂತಿರಾಜ ಇದ್ದ ಕಡೆ ಓಡಿದರು.
ಹಾಗೂ ಒಂದಿಬ್ಬರು ಯುವಕರು ಗೋಣಿ ಚೀಲ ಇಟ್ಟಿರುವ ಆ ಹೊಗೆಯಾಡುವ ಕೋಣೆಯೊಳಗಡೆ ಹೋದರು ಗೋಣಿ ಚೀಲವನ್ನು ಬಹಳ ಪ್ರಯಾಸ ಪಟ್ಟು ಹೊರಗೆ ತಂದರು. ಒಂದು ಕ್ಷಣ ಕೊನೆಯೊಳಗಡೆ ಹೋದ ಆ ಯುವಕರು ಕೆಮ್ಮುತ್ತಾ ಕಣ್ಣುಜ್ಜಿ ಕೊಳ್ಳುತ್ತಿದ್ದಾರೆ. ಇನ್ನು ಅರ್ಧ ದಿನದಿಂದ ಗೋಣಿದಲ್ಲಿ ಬಂದಿಸಲ್ಪಟ್ಟು ಮುದುಡಿ ಬಿದ್ದಿರುವ ಯುವಕನ ಪರಿಸ್ಥಿತಿ...!

ಒಬ್ಬ ಯುವಕ ಗೋಣಿ ಚೀಲದ ಬಾಯಿ ತೆರೆದ, ಆ ಭಯಾನಕ ದೃಶ್ಯ ನೋಡಿ ಎಲ್ಲರು ಗಾಬರಿ ಗೊಂಡರು.

(ಮುಂದುವರೆಯುತ್ತದೆ)

ಕಾಮೆಂಟ್‌ಗಳು

Popular Posts

ಬಾಳು ಮತ್ತು ಗೋಳು

ಸಾತ್ವಿಕ ಜೀವನದ ದಾರಿಯಲಿ ನಡೆಯಲಾರದೆ ಎಡವಿದವನು ಅಲೆಮಾರಿಯೋ...! ಹಣೆಬರಹವನು ಗೀಚಿಬಿಟ್ಟ ಭಗವಂತನು ಏನನ್ನೂ ಅರಿಯದ ಸೋಮಾರಿಯೋ....! ಜನಮ ನೀಡಿ ತಿದ್ದಿ ತೀಡಿ, ಸನ್ಮಾರ್ಗದಲಿ ನಡೆಯಲು ಪ್ರೇರೇಪಿಸಿದವರಿಗೆ ಅಭಾರಿಯೋ.!  ಮೌನವಾಗಿದ್ದು, ಜೀವಚ್ಛವದಂತಿರುವ, ಮುಗ್ದ ಮನಸ್ಸಿನ ಮೇಲೆ ದಬ್ಬಾಳಿಕೆಯ ಸವಾರಿಯೋ...! ಅಂಬೆಗಾಲಲಿ ಕಲಿತು, ದಾಪುಗಾಲಲಿ ನಡೆದು , ಕೋಲೂರಿ ನಡೆವ ತನಕ, ಬಾಳೆಂಬುದು ರಹದಾರಿಯೋ...!                                                        -ಮಿಥುನ್ ಜೈನ್

ಸರಳತೆ ಸೌಹಾರ್ದತೆ - ಮನುಜ ಕುಲಂ ತಾನೊಂದೆ ವಲಂ

ಮನುಜ ಕುಲಂ ತಾನೊಂದೆ ವಲಂ (ಸರಳ ಸೌಹಾರ್ದತೆ)  ಧರ್ಮಗಳೆಲ್ಲವು  ಒಳಿತನು ನೆನೆದರೆ ಜನಗಳ ಮದ್ಯೆ ದ್ವೇಷವೇಕೆ  !  ?  ಕರ್ಮ ಕಾಯಕವ ಮನವ ಬಯಸಿದರೆ ಪರರದು ಎಂಬ ಹಂಗೇಕೆ  ! ?  !ಪ! ಮಂದಿಯ ಮದ್ಯೆ ಮುನಿಸಿರದಿದ್ದರೆ  ಜಾತಿ ಜಾತಿ ನಡು ಬಿರುಕೇಕೆ  !  ?  ಒಂದಾಗಿದ್ದರೆ, ಎಲ್ಲಾ ಪಂಗಡಗಳು. ಏಕಿದೆ ನಡು ನಡು ಗೋಡೆಗಳು   ! ಪ! ಸಾರಿದರಲ್ಲವೇ  ಕವಿ ಕುವೆಂಪು. ವಿಶ್ವ ಮಾನವತೆಯ ಕಂಪು.  !  ಒಂದೇ,,ಜಾತಿ ಮತ, ದೇವರು ಎಂದರು.  ಗುರು ಶ್ರೀ ನಾರಾಯಣರು.   ! ಪ! ಇದ ಅರಿತರೆ ಬದುಕಿನ ಮಾರ್ಗ. ಬಾಳೊಂದು ನೆಮ್ಮದಿಯ ಸ್ವರ್ಗ. ! ಆದಿಕವಿ ಪಂಪನ ಕನ್ನಡ ಹೊನ್ನುಡಿ ಅಚಲ. ಮನುಜ ಕುಲ, ತಾನೊಂದೆ ವಲ  !ಪ!    ✍️ಎನ್. ಮಿಥುನ್ ಜೈನ್

ಅಮಾಯಕ ನೈಜ ಕಥೆ ( ಸಂಚಿಕೆ-೧೦)

 ಶಾಂತಿರಾಜನನ್ನು ಕಟ್ಟಿ ಹಾಕಿದ ಗೋಣಿ ಚೀಲವನ್ನು ಬಿಡಿಸಿ ನೋಡಿದಾಗ.. ಆ ದೃಶ್ಯ ನೋಡಿದ ಮನೆ ಮಂದಿಯೆಲ್ಲ ಒಮ್ಮೆಲೆ ಗಾಬರಿಗೊಂಡರು ಕೆಲವರು ಭಯದಿಂದ ಕಿರುಚಾಡಿದರು. ಶಾಂತಿರಾಜನ ದೇಹ ಮರುಗಟ್ಟಿ ಹೋಗಿತ್ತು. ಕೈ ಕಾಲುಗಳು ಜಡ್ಡುಗಟ್ಟಿ ಹೋಗಿತ್ತು.  ನರಕವೇದನೆಯನ್ನು ತಡೆಯಲಾರದೆ  ಅಲ್ಲಿಯೇ ಮಲ ಮೂತ್ರ ವಿಸರ್ಜನೆ ಆಗಿದೆ. ಯಾವುದೇ ಮಿಸುಕಾಟ ಇಲ್ಲ,   ಅವರಲ್ಲಿ ಯಾರೋ ಒಬ್ಬರು,  ಮೂಗಿನ ಬಳಿ ಕೈ ಹಿಡಿದರು, ಉಸಿರಾಡುತ್ತಿದ್ದಾನೆ.  ಮೂರ್ಛೆ ಹೋಗಿ ತುಂಬಾ ಹೊತ್ತಾಗಿದೆ. ಆದರೆ ಪ್ರಾಣ ಹೋಗಿಲ್ಲ.  ಮುಖಕ್ಕೆ ನೀರು ಚಿಮುಕಿಸಿದರು, ಆದರೆ ಪ್ರಜ್ಞೆ ಬರುತ್ತಿಲ್ಲ. ಹೀಗೆ ಕಮಲಕ್ಕ ನಡೆದ ಘಟನೆಯನ್ನು ವಿವರಿಸುತ್ತಿದ್ದಾರೆ,  ತನ್ನ ಕರುಳ ಕುಡಿಯ ಪ್ರಾಣ ವೇದನೆಯ ಕಥೆಯನ್ನು ಕಮಲಕ್ಕನ ಬಾಯಿಯಿಂದ ಕೇಳುತ್ತಿದ್ದಾಗ ಮರುದೇವಿಯವರು ಕೋಪ ಮತ್ತು ದುಃಖ್ಖದಿಂದ ಕುದಿಯುತ್ತಿದ್ದಾರೆ. ಕಮಲಕ್ಕ ಮತ್ತೆ ಆ ದುಃಖ್ಖದ ಕಥೆ ಯನ್ನು ಮುಂದುವರೆಸಿದರು. ಪುಂಡ ಯುವಕರ ಅಹಂಕಾರವೆಲ್ಲ ಇಳಿದುಹೋಗಿದೆ,  ಸಂಪೂರ್ಣ ಬೆವತು ಹೋಗಿದ್ದಾರೆ  ತಾವು ಮಾಡಿದ ಮಹಾ ಅಪರಾಧದ ಅರಿವಾಗಿ, ಬಹಳವಾಗಿ ನೊಂದು ಕೊಂಡರು. ಕೊನೆಗೆ ಯುವಕರೆಲ್ಲ ಒಂದು ನಿರ್ಧಾರಕ್ಕೆ ಬಂದರು. ಹೇಗಾದರು ಮಾಡಿ ಶಾಂತಿರಾಜನನ್ನು ಬದುಕಿಸ ಬೇಕು. ಕೂಡಲೇ,  ಯುವಕರೆಲ್ಲ ಸೇರಿ 'ಶಾಂತಿ'ಯನ್ನು ಭಾವಿ ಕಟ್ಟೆಯ ಬಳಿ ಕುಳ್ಳಿರಿಸಿ ತಲೆಗೆ ಕೊಡಪಾನದಿಂದ ನೀರ...