ವಿಷಯಕ್ಕೆ ಹೋಗಿ

ಅಮಾಯಕ ನೈಜ ಕಥೆ ( ಸಂಚಿಕೆ-೦೬)

ಮದುವೆಯ ಸಮಾರಂಭವೊಂದರಲ್ಲಿ ಮರುದೇವಿ ಅವರಿಗೆ ತನ್ನ ಮಗನದ್ದು ಸ್ವಭಾವಿಕ ಸಾವಲ್ಲ ಅದು ಕೊಲೆ ಎಂದು ತಿಳಿಯುತ್ತದೆ. 
ಹೆಂಗಸರಿಬ್ಬರು ಇವರ ಮಗ ಶಾಂತಿರಾಜನ ಬಗ್ಗೆ ಮಾತನಾಡುವುದನ್ನು ಇವರು ಆಕಸ್ಮಿಕವಾಗಿ ಕೇಳಿಸಿಕೊಂಡಿರುತ್ತಾರೆ. 
ಕೂಡಲೇ ಆ ಮಹಿಳೆಯಲ್ಲಿ ವಿಚಾರಿಸಿದಾಗ ಅವರು ವಿಷಯವನ್ನು ಸರಿಯಾಗಿ ಹೇಳಲಿಲ್ಲ.

 ಮಾತನಾಡಿಕೊಂಡಿದ್ದ ಮಹಿಳೆಯರಲ್ಲಿ ಒಬ್ಬರ ಪರಿಚಯ 'ಮರುದೇವಿಯವರಿಗೆ ಇತ್ತು.
ಮಗನದ್ದು ಸಹಜ ಸಾವಲ್ಲ ಕೊಲೆ ಎಂದು ತಿಳಿದ ಕೂಡಲೆ ಮರುದೇವಿ ಅಮ್ಮ,ಕೋಪ ಆವೇಶದಿಂದ ಕ್ರುದ್ರರಾದರು, ತನ್ನ ಬಗ್ಗೆಯೇ ತನಗೆ ಜಿಗುಪ್ಸೆ ಆಯಿತು.

ನನ್ನ ಮಗನ ಸಾವಿನ ಬಗ್ಗೆ ನಿಜ ವಿಷಯ ಹೇಗಾದರೂ ಮಾಡಿ ತಿಳಿದು ಕೊಳ್ಳಲೇ ಬೇಕು ಎಂದು ದೃಢ ನಿರ್ಧಾರಕ್ಕೆ ಬಂದರು.

ಮದುವೆಯಲ್ಲಿ, ಇವರ ಮಗನ ಸಾವಿನ ಬಗ್ಗೆ ಮಾತನಾಡುತಿದ್ದ ಮಹಿಳೆಯರಲ್ಲಿ ಒಬ್ಬಾಕೆ ಕಮಲಕ್ಕ . 
ಆ ಮಹಿಳೆಯ ಮನೆ , ಇವರಿಗೆ ತಿಳಿದಿತ್ತು.

ಒಂದು ದಿನ ಇವರು ಬೆಳಗ್ಗಿನ ಹೊತ್ತು, ಕಮಲಕ್ಕನನ್ನು ಹುಡುಕಿಕೊಂಡು ಅವರ ಮನೆಯತ್ತ ಹೋದರು. ಇವರನ್ನು ನೋಡಿದ ಕೂಡಲೇ ಕಮಲಕ್ಕ ಗಾಬರಿಗೊಂಡರೂ ತೋರ್ಪಡಿಸಿಕೊಳ್ಳಲಿಲ್ಲ. ಹಾಗೂ ಮನೆಗೆ ಬಂದ ಇವರನ್ನು ಕುಳ್ಳಿರಿಸಿ ಉಪಚರಿಸಿದರು,

ಮರುದೇವಿ ಅಮ್ಮ ಮಾತನಾಡುತ್ತ ನೇರವಾಗಿ ತನ್ನ ಮಗನ ವಿಷಯಕ್ಕೆ ಬಂದರು. ಆಗ ಕಮಲಕ್ಕ
" ನೋಡಿ ಅಕ್ಕಾ, ನನಗೆ ಆ ಘಟನೆಯ ಬಗ್ಗೆ ಗೊತ್ತಿಲ್ಲ, ಯಾರೋ ಮಾತನಾಡುವುದನ್ನು ಕೇಳಿಸಿಕೊಂಡಿದ್ದೇನೆ ಅಷ್ಟೇ " ಎಂದರು.
ಆಗ ಮರುದೇವಿ ಅಮ್ಮ
 " ಇರಬಹುದು ಕಮಲ, ಆದರೆ ಆ ಮನೆಯವರು ನಿನ್ನ ಸಂಬಂಧಿಕರೆಂದು ನನಗೆ ತಿಳಿದಿದೆ. ಅದಲ್ಲದೆ ಮದುವೆಯ ಸಂದರ್ಭದಲ್ಲಿ ನೀನು ಆ ಮನೆಯಲ್ಲಿ ಇದ್ದವಳು. ಈಗ ಏನು ತಿಳಿದಿಲ್ಲ ಎಂದು ಹೇಳಿದರೆ, ಹೇಗೆ ? ನೀನು ಏನೂ ಹೇಳದೆ ಇದ್ದರೆ ನಾನು ನಿನ್ನನ್ನೂ ಸೇರಿಸಿ ಎಲ್ಲರ ಮೇಲು ಪೊಲೀಸರಿಗೆ ದೂರು ಕೊಡ ಬೇಕಾಗುತ್ತದೆ. " ಎಂದು ಸ್ವಲ್ಪ ಕಟುವಾಗಿ ನುಡಿದರು. 
ಇದರಿಂದ ಸ್ವಲ್ಪ ಬೆದರಿದ ಕಮಲಕ್ಕ,
" ನೋಡಿ ಅಕ್ಕಾ, ದಯವಿಟ್ಟು ಅಂತಹ ಕೆಲಸ ಮಾಡಬೇಡಿ, ನನಗೆ ಗೊತ್ತಿರುವುದನ್ನು ಎಲ್ಲವನ್ನು ಹೇಳುತ್ತೇನೆ. ಆ ವ್ಯಕ್ತಿಗಳು ಶ್ರೀಮಂತರು, ಬಲಾಡ್ಯರು ಅವರ ವಿಷಯ ನನಗ್ಯಾಕೆ ಎಂದು ಸುಮ್ಮನಿದ್ದೆ. ಈಗ ಎಲ್ಲವನ್ನು ಹೇಳುತ್ತೇನೆ ಕೇಳಿ." ಎಂದರು ಕಮಲಕ್ಕ.

ಮದುವೆ ಮನೆಯಲ್ಲಿ ನಡೆದ ಘಟನೆ ಗಳನ್ನು ವಿವರಿಸತೊಡಗಿದರು ಕಮಲಕ್ಕ,,,

(ಮುಂದುವರಿಯುತ್ತದೆ)

ಕಾಮೆಂಟ್‌ಗಳು

Popular Posts

ಬಾಳು ಮತ್ತು ಗೋಳು

ಸಾತ್ವಿಕ ಜೀವನದ ದಾರಿಯಲಿ ನಡೆಯಲಾರದೆ ಎಡವಿದವನು ಅಲೆಮಾರಿಯೋ...! ಹಣೆಬರಹವನು ಗೀಚಿಬಿಟ್ಟ ಭಗವಂತನು ಏನನ್ನೂ ಅರಿಯದ ಸೋಮಾರಿಯೋ....! ಜನಮ ನೀಡಿ ತಿದ್ದಿ ತೀಡಿ, ಸನ್ಮಾರ್ಗದಲಿ ನಡೆಯಲು ಪ್ರೇರೇಪಿಸಿದವರಿಗೆ ಅಭಾರಿಯೋ.!  ಮೌನವಾಗಿದ್ದು, ಜೀವಚ್ಛವದಂತಿರುವ, ಮುಗ್ದ ಮನಸ್ಸಿನ ಮೇಲೆ ದಬ್ಬಾಳಿಕೆಯ ಸವಾರಿಯೋ...! ಅಂಬೆಗಾಲಲಿ ಕಲಿತು, ದಾಪುಗಾಲಲಿ ನಡೆದು , ಕೋಲೂರಿ ನಡೆವ ತನಕ, ಬಾಳೆಂಬುದು ರಹದಾರಿಯೋ...!                                                        -ಮಿಥುನ್ ಜೈನ್

ಸರಳತೆ ಸೌಹಾರ್ದತೆ - ಮನುಜ ಕುಲಂ ತಾನೊಂದೆ ವಲಂ

ಮನುಜ ಕುಲಂ ತಾನೊಂದೆ ವಲಂ (ಸರಳ ಸೌಹಾರ್ದತೆ)  ಧರ್ಮಗಳೆಲ್ಲವು  ಒಳಿತನು ನೆನೆದರೆ ಜನಗಳ ಮದ್ಯೆ ದ್ವೇಷವೇಕೆ  !  ?  ಕರ್ಮ ಕಾಯಕವ ಮನವ ಬಯಸಿದರೆ ಪರರದು ಎಂಬ ಹಂಗೇಕೆ  ! ?  !ಪ! ಮಂದಿಯ ಮದ್ಯೆ ಮುನಿಸಿರದಿದ್ದರೆ  ಜಾತಿ ಜಾತಿ ನಡು ಬಿರುಕೇಕೆ  !  ?  ಒಂದಾಗಿದ್ದರೆ, ಎಲ್ಲಾ ಪಂಗಡಗಳು. ಏಕಿದೆ ನಡು ನಡು ಗೋಡೆಗಳು   ! ಪ! ಸಾರಿದರಲ್ಲವೇ  ಕವಿ ಕುವೆಂಪು. ವಿಶ್ವ ಮಾನವತೆಯ ಕಂಪು.  !  ಒಂದೇ,,ಜಾತಿ ಮತ, ದೇವರು ಎಂದರು.  ಗುರು ಶ್ರೀ ನಾರಾಯಣರು.   ! ಪ! ಇದ ಅರಿತರೆ ಬದುಕಿನ ಮಾರ್ಗ. ಬಾಳೊಂದು ನೆಮ್ಮದಿಯ ಸ್ವರ್ಗ. ! ಆದಿಕವಿ ಪಂಪನ ಕನ್ನಡ ಹೊನ್ನುಡಿ ಅಚಲ. ಮನುಜ ಕುಲ, ತಾನೊಂದೆ ವಲ  !ಪ!    ✍️ಎನ್. ಮಿಥುನ್ ಜೈನ್

ಅಮಾಯಕ ನೈಜ ಕಥೆ ( ಸಂಚಿಕೆ-೧೦)

 ಶಾಂತಿರಾಜನನ್ನು ಕಟ್ಟಿ ಹಾಕಿದ ಗೋಣಿ ಚೀಲವನ್ನು ಬಿಡಿಸಿ ನೋಡಿದಾಗ.. ಆ ದೃಶ್ಯ ನೋಡಿದ ಮನೆ ಮಂದಿಯೆಲ್ಲ ಒಮ್ಮೆಲೆ ಗಾಬರಿಗೊಂಡರು ಕೆಲವರು ಭಯದಿಂದ ಕಿರುಚಾಡಿದರು. ಶಾಂತಿರಾಜನ ದೇಹ ಮರುಗಟ್ಟಿ ಹೋಗಿತ್ತು. ಕೈ ಕಾಲುಗಳು ಜಡ್ಡುಗಟ್ಟಿ ಹೋಗಿತ್ತು.  ನರಕವೇದನೆಯನ್ನು ತಡೆಯಲಾರದೆ  ಅಲ್ಲಿಯೇ ಮಲ ಮೂತ್ರ ವಿಸರ್ಜನೆ ಆಗಿದೆ. ಯಾವುದೇ ಮಿಸುಕಾಟ ಇಲ್ಲ,   ಅವರಲ್ಲಿ ಯಾರೋ ಒಬ್ಬರು,  ಮೂಗಿನ ಬಳಿ ಕೈ ಹಿಡಿದರು, ಉಸಿರಾಡುತ್ತಿದ್ದಾನೆ.  ಮೂರ್ಛೆ ಹೋಗಿ ತುಂಬಾ ಹೊತ್ತಾಗಿದೆ. ಆದರೆ ಪ್ರಾಣ ಹೋಗಿಲ್ಲ.  ಮುಖಕ್ಕೆ ನೀರು ಚಿಮುಕಿಸಿದರು, ಆದರೆ ಪ್ರಜ್ಞೆ ಬರುತ್ತಿಲ್ಲ. ಹೀಗೆ ಕಮಲಕ್ಕ ನಡೆದ ಘಟನೆಯನ್ನು ವಿವರಿಸುತ್ತಿದ್ದಾರೆ,  ತನ್ನ ಕರುಳ ಕುಡಿಯ ಪ್ರಾಣ ವೇದನೆಯ ಕಥೆಯನ್ನು ಕಮಲಕ್ಕನ ಬಾಯಿಯಿಂದ ಕೇಳುತ್ತಿದ್ದಾಗ ಮರುದೇವಿಯವರು ಕೋಪ ಮತ್ತು ದುಃಖ್ಖದಿಂದ ಕುದಿಯುತ್ತಿದ್ದಾರೆ. ಕಮಲಕ್ಕ ಮತ್ತೆ ಆ ದುಃಖ್ಖದ ಕಥೆ ಯನ್ನು ಮುಂದುವರೆಸಿದರು. ಪುಂಡ ಯುವಕರ ಅಹಂಕಾರವೆಲ್ಲ ಇಳಿದುಹೋಗಿದೆ,  ಸಂಪೂರ್ಣ ಬೆವತು ಹೋಗಿದ್ದಾರೆ  ತಾವು ಮಾಡಿದ ಮಹಾ ಅಪರಾಧದ ಅರಿವಾಗಿ, ಬಹಳವಾಗಿ ನೊಂದು ಕೊಂಡರು. ಕೊನೆಗೆ ಯುವಕರೆಲ್ಲ ಒಂದು ನಿರ್ಧಾರಕ್ಕೆ ಬಂದರು. ಹೇಗಾದರು ಮಾಡಿ ಶಾಂತಿರಾಜನನ್ನು ಬದುಕಿಸ ಬೇಕು. ಕೂಡಲೇ,  ಯುವಕರೆಲ್ಲ ಸೇರಿ 'ಶಾಂತಿ'ಯನ್ನು ಭಾವಿ ಕಟ್ಟೆಯ ಬಳಿ ಕುಳ್ಳಿರಿಸಿ ತಲೆಗೆ ಕೊಡಪಾನದಿಂದ ನೀರ...