ವಿಷಯಕ್ಕೆ ಹೋಗಿ

ಅಮಾಯಕ ನೈಜ ಕಥೆ ( ಸಂಚಿಕೆ-೦೫)

ಮರುದೇವಿಯವರ ಮೂವರು ಮಕ್ಕಳಲ್ಲಿ ಹಿರಿಯವನು ಗಂಡು ಮಗ ಶಾಂತಿ,, ಶಾಂತಿರಾಜ. ಸುಮಾರು ಮೂವತ್ತು ವರ್ಷದ ಯುವಕ. ಅವಿವಾಹಿತ, ಇಬ್ಬರು ಹೆಣ್ಣು ಮಕ್ಕಳು ಸರಸ್ವತಿ ಮತ್ತು ಸುನಂದಾ, ಶಾಂತಿರಾಜನಿಗಿಂತ  ವಯಸ್ಸಿನಲ್ಲಿ ತುಂಬಾ ಸಣ್ಣವರು.

     ತನ್ನ ಗಂಡು ಮಕ್ಕಳಲ್ಲಿ ಬದುಕಿ ಉಳಿದಿದ್ದವನು 'ಶಾಂತಿರಾಜ' ಒಬ್ಬನೆ.  ಅವನು ಕೆಲ ಸಮಯದಿಂದ ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದು ಈ ದಿನ ಪ್ರಾಣ ಬಿಟ್ಟ.
ಹೆತ್ತ ತಾಯಿಯ ರೋದನ ಮುಗಿಲು ಮುಟ್ಟಿತು.

ಅದು ಮಳೆಗಾಲದ ಸಮಯ ಎಡೆಬಿಡದೆ ಮಳೆ ಸುರಿಯುತ್ತಿದೆ. ಇವರಿರುವ ಮನೆಯಿಂದ ಪಟ್ಟಣಕ್ಕೆ ಹೋಗಲು ನದಿ ದಾಟ ಬೇಕು. ನದಿಯು ತುಂಬಿ ಹರಿಯುತ್ತಿದೆ. ದೋಣಿಯ ವ್ಯವಸ್ಥೆ ಇಲ್ಲ.  ತೆಪ್ಪ ಕಟ್ಟಿರಲಿಲ್ಲ. ನೆಂಟರಿಷ್ಟರು ಇರುವುದು ಸ್ವಲ್ಪ ದೂರದ ಊರಿನಲ್ಲಿ.  ಅವರನ್ನು ಕರೆಯಲು ನದಿ ದಾಟಿ ಹೋಗಬೇಕು. ಅದು ಈಗ ಅಸಾಧ್ಯ.   ಇದರಿಂದಾಗಿ ಅವರ್ಯಾರು ಮಗನ ಶವ ಸಂಸ್ಕಾರಕ್ಕೆ ಭಾಗವಹಿಸುವಂತಿಲ್ಲ.
ನದಿಯಲ್ಲಿ ನೀರು ಇಳಿಯುವ ಲಕ್ಷಣ ಕಾಣುತ್ತಿಲ್ಲ. ಬೇರೆ ದಾರಿ ತೋಚದೆ ಶವ ಸಂಸ್ಕಾರಕ್ಕೆ ರೆಡಿ ಮಾಡಿದರು.  ನೆರೆಹೊರೆಯವರು ಎಲ್ಲಾ ವ್ಯವಸ್ಥೆ ಮಾಡಿಕೊಟ್ಟರು.
ಆದರೆ ವಿಧಿ ವಿಧಾನಗಳನ್ನು ಇವರೆ ನೆರೆವೆರಿಸುತ್ತಿದ್ದಾರೆ.
ಆ  ಎರಡು ಹೆಣ್ಣು ಮಕ್ಕಳೊಂದಿಗೆ ಸೇರಿ, ತಾಯಿ ತನ್ನ ಗಂಡು ಕುಡಿ ಒಬ್ಬನೇ ಮಗನ ಅಂತ್ಯ ಕ್ರಿಯೆಯನ್ನು ಮಾಡುತ್ತಿದ್ದಾರೆ.
ಇವರ ಸಂಬಂಧಿಕ ಊರಿನ ಹಿರಿಯವರೊಬ್ಬರು ಅಂತ್ಯ ಕ್ರಿಯೆ ನಡೆಸಲು ನಿರ್ದೇಶನ  ನೀಡುತ್ತಿದ್ದಾರೆ. ಆದರೆ ಆ ವ್ಯಕ್ತಿ ದೈವಸ್ಥಾನವೊಂದರ ಗಡಿಪ್ರದಾನ ಆದವರು ಶವ ಮುಟ್ಟುವಂತಿಲ್ಲ,
ಈ ಮೂವರು ತಾಯಿ ಮಕ್ಕಳು ಸೇರಿಕೊಂಡು, ಮೃತ ದೇಹವನ್ನು ಧಪನ ಮಡುವೆಡೆ ಕಷ್ಟ ಪಟ್ಟು  ಸಾಗಿಸುತ್ತಿದ್ದಾರೆ. ಅಲ್ಲಲ್ಲಿ ಇಟ್ಟು ಇಟ್ಟು ಸಾಗಾಟ ಮಾಡುತ್ತಿದ್ದಾರೆ.
ಕಟ್ಟಿಗೆ ಜೋಡಿಸಿ ಮಳೆ ಬಿಟ್ಟ ನಂತರ ಹೇಗೋ ಶವ ಸಂಸ್ಕಾರ ಮುಗಿಸಿದರು.

 ಮಗ 'ಶಾಂತಿರಾಜ' ದಿಢೀರ್ ಖಾಯಿಲೆ ಬಂದು ಮರಣ ಹೊಂದಿದ.
ಇದ್ದ ಒಬ್ಬನೇ ಒಬ್ಬ ಗಂಡು ಮಗ. ಬಾಳಿ ಬದುಕಬೇಕಿದ್ದವ. ಮುಪ್ಪಿನಲ್ಲಿ ತನಗೆ ಆಸರೆ ಆಗಬೇಕಿದ್ದವ, ಈಗ ನಮ್ಮೆಲ್ಲರನ್ನು ಅಗಲಿದ.  ಸಂಬಂದಿಕರು, ಊರವರು ಸಮಾಧಾನ ಪಡಿಸಿ ಹೋದರು.  ಆದರೆ  ತಾಯಿ ಜೀವಂತವಾಗಿರುವಷ್ಟು ದಿನ ತನ್ನ ಕರುಳ ಕುಡಿಯನ್ನು ಮರೆಯಲು ಸಾಧ್ಯವೇ ?.  ಅದರಲ್ಲೂ ಬೆಳೆದು ನಿಂತದ್ದ ಬಿಸಿರಕ್ತದ ಯುವಕ.

ದಿನಗಳು ಉರುಳಿದವು, ತಿಂಗಳುಗಳು ಉರಿದವು.  ಮರುದೇವಿ ಅಮ್ಮನವರ  ದುಃಖ್ಖ ಸ್ವಲ್ಪ ಕಡಿಮೆಯಾಗಿತ್ತು 
  
   ಪಕ್ಕದ ಊರಿನಲ್ಲಿ ಯಾರದೋ ಮದುವೆಯ ಸಮಾರಂಭ ಇತ್ತು. ಮದುವೆ ಮನೆಯವರು ಬಹಳ ಒತ್ತಾಯ ಪಡಿಸಿದ್ದರಿಂದ,  ಮರುದೇವಿ ಅವರು ಮದುವೆಗೆ ಹೋಗಿದ್ದರು. ಮದುವೆಯ ಕಾರ್ಯಕ್ರಮಗಳು ಮುಗಿದವು. ಊಟ ಆದ ನಂತರ ಮಹಿಳೆಯರೆಲ್ಲ ಒಂದಡೆ ಕುಳಿತು ಮಾತನಾಡುತ್ತಿದ್ದರು. ಆ ಗುಂಪಿನ ಬಳಿ. ಮರುದೇವಿ ಅಮ್ಮನು ಹೋಗಿ ಕುಳಿತಿದ್ದರು.  ಆಗ ಹಿಂಬದಿಯಲ್ಲಿ ಕುಳಿತ ಮಹಿಳೆ ತನ್ನ ಪಕ್ಕದಲ್ಲಿ ಕುಳಿತಿದ್ದಾಕೆಯ ಬಳಿ,  ಮರುದೇವಿಯವರನ್ನು ತೋರಿಸಿ, ಏನೋ ಮೆಲ್ಲನೆ ಪಿಸುಗುಟ್ಟಿದರು.
ಆದರೆ ಆ ಮಾತು ಮರುದೇವಿ ಅವರ ಕಿವಿಗೂ ಬಿತ್ತು.

ಆ ಮಹಿಳೆ ಹೇಳಿದ್ದು 
"ಇವರ ಮಗನನ್ನೇ ಅವತ್ತು ಬೆಳಿಯೂರಿನವರ ಮದುವೆಯ ಮನೆಯಲ್ಲಿ ಕೊಲೆ ಮಾಡಿದ್ದು" ಎಂದು.
ಆ ಮಾತನ್ನು ಕೇಳಿ ಮರುದೇವಿಯವರಿಗೆ ಸಿಡಿಲು ಬಡಿದಂತೆ ಆಯಿತು. ನಿಂತ ನೆಲ ಕುಸಿದಂತೆ ಆಯಿತು.

ಏನು ಹೇಳುತ್ತಿದ್ದಾರೆ ಈ ಮಹಿಳೆ. ನನ್ನ ಮಗನದ್ದು ಸಹಜ ಸಾವಲ್ಲವೇ  ?  !

ಕೊಲೆಯೇ   !   ?

(ಮುಂದುವರಿಯುತ್ತದೆ)

ಕಾಮೆಂಟ್‌ಗಳು

Popular Posts

ಬಾಳು ಮತ್ತು ಗೋಳು

ಸಾತ್ವಿಕ ಜೀವನದ ದಾರಿಯಲಿ ನಡೆಯಲಾರದೆ ಎಡವಿದವನು ಅಲೆಮಾರಿಯೋ...! ಹಣೆಬರಹವನು ಗೀಚಿಬಿಟ್ಟ ಭಗವಂತನು ಏನನ್ನೂ ಅರಿಯದ ಸೋಮಾರಿಯೋ....! ಜನಮ ನೀಡಿ ತಿದ್ದಿ ತೀಡಿ, ಸನ್ಮಾರ್ಗದಲಿ ನಡೆಯಲು ಪ್ರೇರೇಪಿಸಿದವರಿಗೆ ಅಭಾರಿಯೋ.!  ಮೌನವಾಗಿದ್ದು, ಜೀವಚ್ಛವದಂತಿರುವ, ಮುಗ್ದ ಮನಸ್ಸಿನ ಮೇಲೆ ದಬ್ಬಾಳಿಕೆಯ ಸವಾರಿಯೋ...! ಅಂಬೆಗಾಲಲಿ ಕಲಿತು, ದಾಪುಗಾಲಲಿ ನಡೆದು , ಕೋಲೂರಿ ನಡೆವ ತನಕ, ಬಾಳೆಂಬುದು ರಹದಾರಿಯೋ...!                                                        -ಮಿಥುನ್ ಜೈನ್

ಸರಳತೆ ಸೌಹಾರ್ದತೆ - ಮನುಜ ಕುಲಂ ತಾನೊಂದೆ ವಲಂ

ಮನುಜ ಕುಲಂ ತಾನೊಂದೆ ವಲಂ (ಸರಳ ಸೌಹಾರ್ದತೆ)  ಧರ್ಮಗಳೆಲ್ಲವು  ಒಳಿತನು ನೆನೆದರೆ ಜನಗಳ ಮದ್ಯೆ ದ್ವೇಷವೇಕೆ  !  ?  ಕರ್ಮ ಕಾಯಕವ ಮನವ ಬಯಸಿದರೆ ಪರರದು ಎಂಬ ಹಂಗೇಕೆ  ! ?  !ಪ! ಮಂದಿಯ ಮದ್ಯೆ ಮುನಿಸಿರದಿದ್ದರೆ  ಜಾತಿ ಜಾತಿ ನಡು ಬಿರುಕೇಕೆ  !  ?  ಒಂದಾಗಿದ್ದರೆ, ಎಲ್ಲಾ ಪಂಗಡಗಳು. ಏಕಿದೆ ನಡು ನಡು ಗೋಡೆಗಳು   ! ಪ! ಸಾರಿದರಲ್ಲವೇ  ಕವಿ ಕುವೆಂಪು. ವಿಶ್ವ ಮಾನವತೆಯ ಕಂಪು.  !  ಒಂದೇ,,ಜಾತಿ ಮತ, ದೇವರು ಎಂದರು.  ಗುರು ಶ್ರೀ ನಾರಾಯಣರು.   ! ಪ! ಇದ ಅರಿತರೆ ಬದುಕಿನ ಮಾರ್ಗ. ಬಾಳೊಂದು ನೆಮ್ಮದಿಯ ಸ್ವರ್ಗ. ! ಆದಿಕವಿ ಪಂಪನ ಕನ್ನಡ ಹೊನ್ನುಡಿ ಅಚಲ. ಮನುಜ ಕುಲ, ತಾನೊಂದೆ ವಲ  !ಪ!    ✍️ಎನ್. ಮಿಥುನ್ ಜೈನ್

ಅಮಾಯಕ ನೈಜ ಕಥೆ ( ಸಂಚಿಕೆ-೧೦)

 ಶಾಂತಿರಾಜನನ್ನು ಕಟ್ಟಿ ಹಾಕಿದ ಗೋಣಿ ಚೀಲವನ್ನು ಬಿಡಿಸಿ ನೋಡಿದಾಗ.. ಆ ದೃಶ್ಯ ನೋಡಿದ ಮನೆ ಮಂದಿಯೆಲ್ಲ ಒಮ್ಮೆಲೆ ಗಾಬರಿಗೊಂಡರು ಕೆಲವರು ಭಯದಿಂದ ಕಿರುಚಾಡಿದರು. ಶಾಂತಿರಾಜನ ದೇಹ ಮರುಗಟ್ಟಿ ಹೋಗಿತ್ತು. ಕೈ ಕಾಲುಗಳು ಜಡ್ಡುಗಟ್ಟಿ ಹೋಗಿತ್ತು.  ನರಕವೇದನೆಯನ್ನು ತಡೆಯಲಾರದೆ  ಅಲ್ಲಿಯೇ ಮಲ ಮೂತ್ರ ವಿಸರ್ಜನೆ ಆಗಿದೆ. ಯಾವುದೇ ಮಿಸುಕಾಟ ಇಲ್ಲ,   ಅವರಲ್ಲಿ ಯಾರೋ ಒಬ್ಬರು,  ಮೂಗಿನ ಬಳಿ ಕೈ ಹಿಡಿದರು, ಉಸಿರಾಡುತ್ತಿದ್ದಾನೆ.  ಮೂರ್ಛೆ ಹೋಗಿ ತುಂಬಾ ಹೊತ್ತಾಗಿದೆ. ಆದರೆ ಪ್ರಾಣ ಹೋಗಿಲ್ಲ.  ಮುಖಕ್ಕೆ ನೀರು ಚಿಮುಕಿಸಿದರು, ಆದರೆ ಪ್ರಜ್ಞೆ ಬರುತ್ತಿಲ್ಲ. ಹೀಗೆ ಕಮಲಕ್ಕ ನಡೆದ ಘಟನೆಯನ್ನು ವಿವರಿಸುತ್ತಿದ್ದಾರೆ,  ತನ್ನ ಕರುಳ ಕುಡಿಯ ಪ್ರಾಣ ವೇದನೆಯ ಕಥೆಯನ್ನು ಕಮಲಕ್ಕನ ಬಾಯಿಯಿಂದ ಕೇಳುತ್ತಿದ್ದಾಗ ಮರುದೇವಿಯವರು ಕೋಪ ಮತ್ತು ದುಃಖ್ಖದಿಂದ ಕುದಿಯುತ್ತಿದ್ದಾರೆ. ಕಮಲಕ್ಕ ಮತ್ತೆ ಆ ದುಃಖ್ಖದ ಕಥೆ ಯನ್ನು ಮುಂದುವರೆಸಿದರು. ಪುಂಡ ಯುವಕರ ಅಹಂಕಾರವೆಲ್ಲ ಇಳಿದುಹೋಗಿದೆ,  ಸಂಪೂರ್ಣ ಬೆವತು ಹೋಗಿದ್ದಾರೆ  ತಾವು ಮಾಡಿದ ಮಹಾ ಅಪರಾಧದ ಅರಿವಾಗಿ, ಬಹಳವಾಗಿ ನೊಂದು ಕೊಂಡರು. ಕೊನೆಗೆ ಯುವಕರೆಲ್ಲ ಒಂದು ನಿರ್ಧಾರಕ್ಕೆ ಬಂದರು. ಹೇಗಾದರು ಮಾಡಿ ಶಾಂತಿರಾಜನನ್ನು ಬದುಕಿಸ ಬೇಕು. ಕೂಡಲೇ,  ಯುವಕರೆಲ್ಲ ಸೇರಿ 'ಶಾಂತಿ'ಯನ್ನು ಭಾವಿ ಕಟ್ಟೆಯ ಬಳಿ ಕುಳ್ಳಿರಿಸಿ ತಲೆಗೆ ಕೊಡಪಾನದಿಂದ ನೀರ...