ವಿಷಯಕ್ಕೆ ಹೋಗಿ

ಸಲ್ಲಾಪ



🕺ಪ್ರಿಯಕರ  :-
 'ಬಿಳಿಯುಡುಪಿನ ಬೆಡಗಿಯೇ,, 
ಇಳೆಯ ಸೌಂದರ್ಯದ ಜೊತೆ ಬೆರೆತಾಗ, ಕಲೆತಾಗ,  ಬರುವುದು, 
 ಅದಕ್ಕೊಂದು ಬೆಲೆ,,, 
"ಅಂದ"ಕ್ಕೊಂದು,,, ನೆಲೆ,, 
ಆದರೆ,,,😞
 ಕಳೆದೋಗಿದೆ ಎನ್ನಯ ಮನ.
ಕೇಳು ಸಖಿ ನನ್ನಂತರಂಗವನ್ನ... 
💃ಪ್ರಿಯತಮೆ  :-
"ಗೆಳೆಯಾ... 
"ಕೆಳೆದೋಗದಂತೆ ಜೋಪಾನವಾಗಿರಿಸಿಕೊಳ್ಳೋ ಕಲೆ, ನಿನ್ನಲ್ಲೇ ಇದೆ"
🕺ಪ್ರಿಯಕರ   :-
   "ಅರಿಯದಾದೆನು ಇದರ ತಾತ್ಪರ್ಯವನು. !
ಹೇಗೆ ಅರಿಯಲಿ ಸಖಿ.. ಮನದಿಚ್ಚೆಯ ಪರಿಧಿಯನು, ! ಹೇಗೆ ಅರಿಯಲಿ ನಾ...... !
ಹೇಗೆ ಅಳೆಯಲಿ ನಾ......!
ನೀರಿಲ್ಲಿರೋ ಮೀನ ಹೆಜ್ಜೆಯನು.
ಒಗಟಿನಂತಿದೆ ಸಖಿ ನಿನ್ನೀ ಮಾತು !
ಯೋಚಿಸುತಿರುವೆನು ಅರ್ಥೈಸಿಕೊಳ್ಳಲು ಸೋತು !"
💃ಪ್ರಿಯತಮೆ  :-
"ಪದೇ ಪದೇ ಸೋಲಬಾರದು ಗೆಳೆಯ... 
🕺ಪ್ರಿಯಕರ  :-
"ಸೋಲುತ್ತಿರುವುದು ಯಾರು ಗೆಳತಿ ..
💃ಪ್ರಿಯತಮೆ  :-  (ಮೌನ)
🕺ಪ್ರಿಯಕರ  :-
"ಪ್ರಯತ್ನಕ್ಕೆ ಪಲಿಸದ್ದು ಯಾವುದಿದೆ ಗೆಳತಿ ಈ ಜಗದಲ್ಲಿ...?   !
ಮಧುರತೆಯೇ ತುಂಬಿರುವುದು ನನ್ನೀ ಮನದಲ್ಲಿ.... !
💃ಪ್ರಿಯತಮೆ  :-
"ವ್ಯರ್ಥ ಪ್ರಯತ್ನವೇಕೆ  ? 
ಮತ್ತೆ ಕಾಲಹರಣವೇಕೆ ? 
ನಿಮ್ಮ ಮಧುರತೆಯ ಮನಕೆ ನನ್ನದೊಂದು ನಮನ "
(ಅಡ್ಡ ಗೋಡೆಯ ಮೇಲೆ ದೀಪವಿಟ್ಟಳಾಕೆ.)

ಕೊನೆಗೂ ಅರಿತು ಬಿಟ್ಟನು 
ಆಕೆಯ ಮನದಿಂಗಿತವನು
ಪ್ರಿಯಕರನು.
🕺ಪ್ರಿಯಕರ  :-
"ಮೇಘದತ್ತ ಹಂಬಲಿಸುವ ನೇಗಿಲ ಯೋಗಿಯಂತೆ  !
ಕಾತರದಿ ಕಾದಿರುವೆ. 
ಆದರೆ.... 
ಹತ್ತಿಯ ಹಣ್ಣಿಗೆ ಕಾಯೋ  ಹಕ್ಕಿಯಂತೆ ! 
ಕಾಯಲಾರೆ ಗೆಳತಿ. 
ನಿರಾಶೆ ಎಂಬುದು ನನ್ನೀ ಮನಕ್ಕೆ ಶೂನ್ಯಕ್ಕಿಂತ ಸ್ವಲ್ಪ ಹೆಚ್ಚು ಅಷ್ಟೆ.
ಹೋಗಿ ಬನ್ನಿ ಸಖಿ.... 👏
ಮನದಿಂಗಿತವೇ,,, 
ವರದಂತೆ, ವಚನದಂತೆ, 
ಕೋಟಿ ಭಾರಿ ಶರಣು... "🙏🙏🙏

         ✍️ ಒಂಟಿ ನಾವಿಕ (Mj)

ಕಾಮೆಂಟ್‌ಗಳು

Popular Posts

ಬಾಳು ಮತ್ತು ಗೋಳು

ಸಾತ್ವಿಕ ಜೀವನದ ದಾರಿಯಲಿ ನಡೆಯಲಾರದೆ ಎಡವಿದವನು ಅಲೆಮಾರಿಯೋ...! ಹಣೆಬರಹವನು ಗೀಚಿಬಿಟ್ಟ ಭಗವಂತನು ಏನನ್ನೂ ಅರಿಯದ ಸೋಮಾರಿಯೋ....! ಜನಮ ನೀಡಿ ತಿದ್ದಿ ತೀಡಿ, ಸನ್ಮಾರ್ಗದಲಿ ನಡೆಯಲು ಪ್ರೇರೇಪಿಸಿದವರಿಗೆ ಅಭಾರಿಯೋ.!  ಮೌನವಾಗಿದ್ದು, ಜೀವಚ್ಛವದಂತಿರುವ, ಮುಗ್ದ ಮನಸ್ಸಿನ ಮೇಲೆ ದಬ್ಬಾಳಿಕೆಯ ಸವಾರಿಯೋ...! ಅಂಬೆಗಾಲಲಿ ಕಲಿತು, ದಾಪುಗಾಲಲಿ ನಡೆದು , ಕೋಲೂರಿ ನಡೆವ ತನಕ, ಬಾಳೆಂಬುದು ರಹದಾರಿಯೋ...!                                                        -ಮಿಥುನ್ ಜೈನ್

ಸರಳತೆ ಸೌಹಾರ್ದತೆ - ಮನುಜ ಕುಲಂ ತಾನೊಂದೆ ವಲಂ

ಮನುಜ ಕುಲಂ ತಾನೊಂದೆ ವಲಂ (ಸರಳ ಸೌಹಾರ್ದತೆ)  ಧರ್ಮಗಳೆಲ್ಲವು  ಒಳಿತನು ನೆನೆದರೆ ಜನಗಳ ಮದ್ಯೆ ದ್ವೇಷವೇಕೆ  !  ?  ಕರ್ಮ ಕಾಯಕವ ಮನವ ಬಯಸಿದರೆ ಪರರದು ಎಂಬ ಹಂಗೇಕೆ  ! ?  !ಪ! ಮಂದಿಯ ಮದ್ಯೆ ಮುನಿಸಿರದಿದ್ದರೆ  ಜಾತಿ ಜಾತಿ ನಡು ಬಿರುಕೇಕೆ  !  ?  ಒಂದಾಗಿದ್ದರೆ, ಎಲ್ಲಾ ಪಂಗಡಗಳು. ಏಕಿದೆ ನಡು ನಡು ಗೋಡೆಗಳು   ! ಪ! ಸಾರಿದರಲ್ಲವೇ  ಕವಿ ಕುವೆಂಪು. ವಿಶ್ವ ಮಾನವತೆಯ ಕಂಪು.  !  ಒಂದೇ,,ಜಾತಿ ಮತ, ದೇವರು ಎಂದರು.  ಗುರು ಶ್ರೀ ನಾರಾಯಣರು.   ! ಪ! ಇದ ಅರಿತರೆ ಬದುಕಿನ ಮಾರ್ಗ. ಬಾಳೊಂದು ನೆಮ್ಮದಿಯ ಸ್ವರ್ಗ. ! ಆದಿಕವಿ ಪಂಪನ ಕನ್ನಡ ಹೊನ್ನುಡಿ ಅಚಲ. ಮನುಜ ಕುಲ, ತಾನೊಂದೆ ವಲ  !ಪ!    ✍️ಎನ್. ಮಿಥುನ್ ಜೈನ್

ಅಮಾಯಕ ನೈಜ ಕಥೆ ( ಸಂಚಿಕೆ-೧೦)

 ಶಾಂತಿರಾಜನನ್ನು ಕಟ್ಟಿ ಹಾಕಿದ ಗೋಣಿ ಚೀಲವನ್ನು ಬಿಡಿಸಿ ನೋಡಿದಾಗ.. ಆ ದೃಶ್ಯ ನೋಡಿದ ಮನೆ ಮಂದಿಯೆಲ್ಲ ಒಮ್ಮೆಲೆ ಗಾಬರಿಗೊಂಡರು ಕೆಲವರು ಭಯದಿಂದ ಕಿರುಚಾಡಿದರು. ಶಾಂತಿರಾಜನ ದೇಹ ಮರುಗಟ್ಟಿ ಹೋಗಿತ್ತು. ಕೈ ಕಾಲುಗಳು ಜಡ್ಡುಗಟ್ಟಿ ಹೋಗಿತ್ತು.  ನರಕವೇದನೆಯನ್ನು ತಡೆಯಲಾರದೆ  ಅಲ್ಲಿಯೇ ಮಲ ಮೂತ್ರ ವಿಸರ್ಜನೆ ಆಗಿದೆ. ಯಾವುದೇ ಮಿಸುಕಾಟ ಇಲ್ಲ,   ಅವರಲ್ಲಿ ಯಾರೋ ಒಬ್ಬರು,  ಮೂಗಿನ ಬಳಿ ಕೈ ಹಿಡಿದರು, ಉಸಿರಾಡುತ್ತಿದ್ದಾನೆ.  ಮೂರ್ಛೆ ಹೋಗಿ ತುಂಬಾ ಹೊತ್ತಾಗಿದೆ. ಆದರೆ ಪ್ರಾಣ ಹೋಗಿಲ್ಲ.  ಮುಖಕ್ಕೆ ನೀರು ಚಿಮುಕಿಸಿದರು, ಆದರೆ ಪ್ರಜ್ಞೆ ಬರುತ್ತಿಲ್ಲ. ಹೀಗೆ ಕಮಲಕ್ಕ ನಡೆದ ಘಟನೆಯನ್ನು ವಿವರಿಸುತ್ತಿದ್ದಾರೆ,  ತನ್ನ ಕರುಳ ಕುಡಿಯ ಪ್ರಾಣ ವೇದನೆಯ ಕಥೆಯನ್ನು ಕಮಲಕ್ಕನ ಬಾಯಿಯಿಂದ ಕೇಳುತ್ತಿದ್ದಾಗ ಮರುದೇವಿಯವರು ಕೋಪ ಮತ್ತು ದುಃಖ್ಖದಿಂದ ಕುದಿಯುತ್ತಿದ್ದಾರೆ. ಕಮಲಕ್ಕ ಮತ್ತೆ ಆ ದುಃಖ್ಖದ ಕಥೆ ಯನ್ನು ಮುಂದುವರೆಸಿದರು. ಪುಂಡ ಯುವಕರ ಅಹಂಕಾರವೆಲ್ಲ ಇಳಿದುಹೋಗಿದೆ,  ಸಂಪೂರ್ಣ ಬೆವತು ಹೋಗಿದ್ದಾರೆ  ತಾವು ಮಾಡಿದ ಮಹಾ ಅಪರಾಧದ ಅರಿವಾಗಿ, ಬಹಳವಾಗಿ ನೊಂದು ಕೊಂಡರು. ಕೊನೆಗೆ ಯುವಕರೆಲ್ಲ ಒಂದು ನಿರ್ಧಾರಕ್ಕೆ ಬಂದರು. ಹೇಗಾದರು ಮಾಡಿ ಶಾಂತಿರಾಜನನ್ನು ಬದುಕಿಸ ಬೇಕು. ಕೂಡಲೇ,  ಯುವಕರೆಲ್ಲ ಸೇರಿ 'ಶಾಂತಿ'ಯನ್ನು ಭಾವಿ ಕಟ್ಟೆಯ ಬಳಿ ಕುಳ್ಳಿರಿಸಿ ತಲೆಗೆ ಕೊಡಪಾನದಿಂದ ನೀರ...