ವಿಷಯಕ್ಕೆ ಹೋಗಿ

ಪುತ್ತೂರು ಜಾತ್ರೆ

©https://m.facebook.com/shreemahalingeshwaratempleputtur/photos/pcb

ಪುತ್ತೂರಿನ ಜಾತ್ರೆಯಲ್ಲಿ,, 
ಶಿವನ ಸನ್ನಿಧಾನದಲ್ಲಿ,, 
ವರುಷವು ವರುಷವು.
ಜನರಿಗೆಲ್ಲ ಹರುಷವು  !! 

ಯುಗಾದಿಯ ನಂತರದಲಿ 
ಸಂಕ್ರಮಣವು ಅಂತರದಲಿ  !
ದೀಪೋತ್ಸವ,,  ತೆಪ್ಪೋತ್ಸವ,,  
ಕಟ್ಟೆ ಪೂಜೆ,,  ರಥೋತ್ಸವ,, !
ಗುಡಿಗಳ   ಅಲಂಕಾರ 
ರಂಗೋಲಿಯ ಚಿತ್ತಾರ   !
 ವಾಲಗದ ಝೇಂಕಾರ 
 ತೋರಣಗಳ ಸಿಂಗಾರ    !
ಅನುದಿನವು ಸಂಭ್ರಮದ 
ಪೇಟೆ ಸವಾರಿಯು,, !
ದಿನ ದಿನವು ವೈಭವದ 
ಕಟ್ಟೆ ಪೂಜೆಯು !

ಪುತ್ತೂರಿನ ಜಾತ್ರೆಯಲ್ಲಿ 
ಶಿವನ ಸನ್ನಿಧಾನದಲ್ಲಿ 
ವರುಷವು ವರುಷವು 
ಜನರಿಗೆಲ್ಲ ಹರುಷವು !!

 ಬಲ್ನಾಡಿನ ಉಳ್ಳಾಲ್ತಿಯು 
ಭಂಡಾರದ ಜೊತೆಯಲ್ಲಿ 
ಪರ ಶಿವನ ಆಲಯದಿ 
 ಸಂಭ್ರಮದ  ಭೇಟಿಯು,,!
ಊರಿನ... ಪರ ಊರಿನ.. 
 ಭಕ್ತರೆಲ್ಲ ಸಾಕ್ಷಿಯು. !
ಕಲ್ಯಾಣಿ ಸುತ್ತ ದೀಪ ಹಚ್ಚಿ 
ತೆಪ್ಪದಲ್ಲಿ ಸಾಗಿ ಹೋಗಿ.
ಕೆರೆ ಕಟ್ಟೆ  ಪೂಜೆಯು 
ಚಂದ್ರ ಮಂಡಲ ಸೇವೆಯು !

ಪುತ್ತೂರಿನ ಜಾತ್ರೆಯಲ್ಲಿ 
ಶಿವನ ಸನ್ನಿಧಾನದಲ್ಲಿ 
ವರುಷವು ವರುಷವು 
ಜನರಿಗೆಲ್ಲ ಹರುಷವು !!

ನವದಿನಗಳ ಜಾತ್ರೆಯು 
ಜನ ಜಂಗುಳಿ ಸಂತೆಯು !
ದರ್ಶನ ಬಲಿ ಉತ್ಸವ 
ವೈಭವದ ರಥೋತ್ಸವ  !
ಅರ್ಚಕರ ಮಂತ್ರಘೋಷ 
ಭಕ್ತರ ಜಯಘೋಷ  !
ಚೆಂಡೆ ಜಾಗಟೆಯ,ಸದ್ದಿನೊಡನೆ 
ಸದ್ದಿನ, ಸುಡು ಮದ್ದಿನೊಡನೆ  !
ವರುಷದ ಉತ್ಸವವು 
ಅಂದು ಮುಗಿಯಿತು !
ಬ್ರಹ್ಮ ರಥೋತ್ಸವ 
ಭಕುತರಿಂದ ಎಳೆಯಲ್ಪಟ್ಟಿತು.!

ಪುತ್ತೂರಿನ ಜಾತ್ರೆಯಲ್ಲಿ 
ಶಿವನ ಸನ್ನಿಧಾನದಲ್ಲಿ 
ವರುಷವು ವರುಷವು 
ಜನರಿಗೆಲ್ಲ ಹರುಷವು !!

ಮರುದಿನವೆ ಜಳಕ್ಕಕ್ಕಾಗಿ 
ವೀರ ಮಂಗಲ ದಾರಿಯಾಗಿ  !
  ನದಿಯಲ್ಲಿ ಮಿಂದು ಬಂದು 
 ದೇವನಿಗೆ ತೃಪ್ತಿಯಾಗಿ   
  ಭಕ್ತಿಯಲ್ಲಿ ತೇಲಿ ಹೋಗಿ !
ಕಡೆಯ ದಿನದ ಜಾತ್ರೆಯು 
ಸಂಪನ್ನಗೊಂಡಿತು...
ಪುತ್ತೂರ..ಜಾತ್ರೆಯು 
ಸಂಪನ್ನ ಗೊಂಡಿತು...!

ಪುತ್ತೂರಿನ ಜಾತ್ರೆಯಲ್ಲಿ 
ಶಿವನ ಸನ್ನಿಧಾನದಲ್ಲಿ 
ವರುಷವು ವರುಷವು 
ಜನರಿಗೆಲ್ಲ ಹರುಷವು !!


                                              ✍️ಮಿಥುನ್ ಜೈನ್

ಕಾಮೆಂಟ್‌ಗಳು

Popular Posts

ಬಾಳು ಮತ್ತು ಗೋಳು

ಸಾತ್ವಿಕ ಜೀವನದ ದಾರಿಯಲಿ ನಡೆಯಲಾರದೆ ಎಡವಿದವನು ಅಲೆಮಾರಿಯೋ...! ಹಣೆಬರಹವನು ಗೀಚಿಬಿಟ್ಟ ಭಗವಂತನು ಏನನ್ನೂ ಅರಿಯದ ಸೋಮಾರಿಯೋ....! ಜನಮ ನೀಡಿ ತಿದ್ದಿ ತೀಡಿ, ಸನ್ಮಾರ್ಗದಲಿ ನಡೆಯಲು ಪ್ರೇರೇಪಿಸಿದವರಿಗೆ ಅಭಾರಿಯೋ.!  ಮೌನವಾಗಿದ್ದು, ಜೀವಚ್ಛವದಂತಿರುವ, ಮುಗ್ದ ಮನಸ್ಸಿನ ಮೇಲೆ ದಬ್ಬಾಳಿಕೆಯ ಸವಾರಿಯೋ...! ಅಂಬೆಗಾಲಲಿ ಕಲಿತು, ದಾಪುಗಾಲಲಿ ನಡೆದು , ಕೋಲೂರಿ ನಡೆವ ತನಕ, ಬಾಳೆಂಬುದು ರಹದಾರಿಯೋ...!                                                        -ಮಿಥುನ್ ಜೈನ್

ಸರಳತೆ ಸೌಹಾರ್ದತೆ - ಮನುಜ ಕುಲಂ ತಾನೊಂದೆ ವಲಂ

ಮನುಜ ಕುಲಂ ತಾನೊಂದೆ ವಲಂ (ಸರಳ ಸೌಹಾರ್ದತೆ)  ಧರ್ಮಗಳೆಲ್ಲವು  ಒಳಿತನು ನೆನೆದರೆ ಜನಗಳ ಮದ್ಯೆ ದ್ವೇಷವೇಕೆ  !  ?  ಕರ್ಮ ಕಾಯಕವ ಮನವ ಬಯಸಿದರೆ ಪರರದು ಎಂಬ ಹಂಗೇಕೆ  ! ?  !ಪ! ಮಂದಿಯ ಮದ್ಯೆ ಮುನಿಸಿರದಿದ್ದರೆ  ಜಾತಿ ಜಾತಿ ನಡು ಬಿರುಕೇಕೆ  !  ?  ಒಂದಾಗಿದ್ದರೆ, ಎಲ್ಲಾ ಪಂಗಡಗಳು. ಏಕಿದೆ ನಡು ನಡು ಗೋಡೆಗಳು   ! ಪ! ಸಾರಿದರಲ್ಲವೇ  ಕವಿ ಕುವೆಂಪು. ವಿಶ್ವ ಮಾನವತೆಯ ಕಂಪು.  !  ಒಂದೇ,,ಜಾತಿ ಮತ, ದೇವರು ಎಂದರು.  ಗುರು ಶ್ರೀ ನಾರಾಯಣರು.   ! ಪ! ಇದ ಅರಿತರೆ ಬದುಕಿನ ಮಾರ್ಗ. ಬಾಳೊಂದು ನೆಮ್ಮದಿಯ ಸ್ವರ್ಗ. ! ಆದಿಕವಿ ಪಂಪನ ಕನ್ನಡ ಹೊನ್ನುಡಿ ಅಚಲ. ಮನುಜ ಕುಲ, ತಾನೊಂದೆ ವಲ  !ಪ!    ✍️ಎನ್. ಮಿಥುನ್ ಜೈನ್

ಅಮಾಯಕ ನೈಜ ಕಥೆ ( ಸಂಚಿಕೆ-೧೦)

 ಶಾಂತಿರಾಜನನ್ನು ಕಟ್ಟಿ ಹಾಕಿದ ಗೋಣಿ ಚೀಲವನ್ನು ಬಿಡಿಸಿ ನೋಡಿದಾಗ.. ಆ ದೃಶ್ಯ ನೋಡಿದ ಮನೆ ಮಂದಿಯೆಲ್ಲ ಒಮ್ಮೆಲೆ ಗಾಬರಿಗೊಂಡರು ಕೆಲವರು ಭಯದಿಂದ ಕಿರುಚಾಡಿದರು. ಶಾಂತಿರಾಜನ ದೇಹ ಮರುಗಟ್ಟಿ ಹೋಗಿತ್ತು. ಕೈ ಕಾಲುಗಳು ಜಡ್ಡುಗಟ್ಟಿ ಹೋಗಿತ್ತು.  ನರಕವೇದನೆಯನ್ನು ತಡೆಯಲಾರದೆ  ಅಲ್ಲಿಯೇ ಮಲ ಮೂತ್ರ ವಿಸರ್ಜನೆ ಆಗಿದೆ. ಯಾವುದೇ ಮಿಸುಕಾಟ ಇಲ್ಲ,   ಅವರಲ್ಲಿ ಯಾರೋ ಒಬ್ಬರು,  ಮೂಗಿನ ಬಳಿ ಕೈ ಹಿಡಿದರು, ಉಸಿರಾಡುತ್ತಿದ್ದಾನೆ.  ಮೂರ್ಛೆ ಹೋಗಿ ತುಂಬಾ ಹೊತ್ತಾಗಿದೆ. ಆದರೆ ಪ್ರಾಣ ಹೋಗಿಲ್ಲ.  ಮುಖಕ್ಕೆ ನೀರು ಚಿಮುಕಿಸಿದರು, ಆದರೆ ಪ್ರಜ್ಞೆ ಬರುತ್ತಿಲ್ಲ. ಹೀಗೆ ಕಮಲಕ್ಕ ನಡೆದ ಘಟನೆಯನ್ನು ವಿವರಿಸುತ್ತಿದ್ದಾರೆ,  ತನ್ನ ಕರುಳ ಕುಡಿಯ ಪ್ರಾಣ ವೇದನೆಯ ಕಥೆಯನ್ನು ಕಮಲಕ್ಕನ ಬಾಯಿಯಿಂದ ಕೇಳುತ್ತಿದ್ದಾಗ ಮರುದೇವಿಯವರು ಕೋಪ ಮತ್ತು ದುಃಖ್ಖದಿಂದ ಕುದಿಯುತ್ತಿದ್ದಾರೆ. ಕಮಲಕ್ಕ ಮತ್ತೆ ಆ ದುಃಖ್ಖದ ಕಥೆ ಯನ್ನು ಮುಂದುವರೆಸಿದರು. ಪುಂಡ ಯುವಕರ ಅಹಂಕಾರವೆಲ್ಲ ಇಳಿದುಹೋಗಿದೆ,  ಸಂಪೂರ್ಣ ಬೆವತು ಹೋಗಿದ್ದಾರೆ  ತಾವು ಮಾಡಿದ ಮಹಾ ಅಪರಾಧದ ಅರಿವಾಗಿ, ಬಹಳವಾಗಿ ನೊಂದು ಕೊಂಡರು. ಕೊನೆಗೆ ಯುವಕರೆಲ್ಲ ಒಂದು ನಿರ್ಧಾರಕ್ಕೆ ಬಂದರು. ಹೇಗಾದರು ಮಾಡಿ ಶಾಂತಿರಾಜನನ್ನು ಬದುಕಿಸ ಬೇಕು. ಕೂಡಲೇ,  ಯುವಕರೆಲ್ಲ ಸೇರಿ 'ಶಾಂತಿ'ಯನ್ನು ಭಾವಿ ಕಟ್ಟೆಯ ಬಳಿ ಕುಳ್ಳಿರಿಸಿ ತಲೆಗೆ ಕೊಡಪಾನದಿಂದ ನೀರ...