ವಿಷಯಕ್ಕೆ ಹೋಗಿ

ಮದುವೆ



ನನ್ನ ಕಾಲೇಜು ದಿನಗಳ ಕನ್ನಡ ಪಂಡಿತ ಗುರುಗಳೊಬ್ಬರು,  ಇತ್ತೀಚೆಗೆ ಅಪರೂಪಕ್ಕೆ ಸಿಕ್ಕಿದರು.  ಹೀಗೆ ಕಷ್ಟ ಸುಖ ಸಮಾಚಾರ ಮಾತನಾಡುತ್ತ ನೇರವಾಗಿ ನನ್ನ ಮದುವೆ ಬಗ್ಗೆ ಕೇಳಿಯೇ ಬಿಟ್ಟರು.  ನಾನದಕ್ಕೆ ತಮಾಷೆಗೆ ಅವರೊಡನಿದ್ದ ಸಲಿಗೆಯಿಂದ ಕಾವ್ಯಮಯ ಶೈಲಿಯಲ್ಲಿ ಉತ್ತರಿಸಿದೆ. 

    ""ಮದುವೆ ಭಾವನೆಗಳ 
ಸಾಗರ 
     ಅದು ಪ್ರೀತಿ ಪ್ರೇಮಗಳ 
ಆಗರ 
      ಇದೀಗ ಸಮಸ್ಯೆಗಳು 
ಸಾವಿರ 
      ಅದಕ್ಕೆ ನನಗಿಲ್ಲ ಗುರುಗಳೇ 
ಆತುರ 
      ನಿಮಗ್ಯಾಕೆ ಅಷ್ಟೊಂದು 
ಕಾತುರ ""

 ಇಷ್ಟು  ಹೇಳಿ  ನಕ್ಕು ಅವರ ಮುಖ ನೋಡಿದೆ.  ಇದನ್ನು ಕೇಳಿ ನನ್ನನ್ನು ನೋಡಿ ಕಣ್ಣರಳಿಸಿ ಹುಬ್ಬೇರಿಸಿ,  ನನ್ನ ಶಿಷ್ಯ ಪಳಗಿದಾನೆ ಅನ್ಕೊಂಡಿರ್ಬೇಕು. ನನ್ನನ್ನೇ ನೋಡಿದರು. ಅವರ ಕಣ್ಣಲ್ಲಿ ಅಚ್ಚರಿ ಇದ್ದರೆ. ನನ್ನ ಕಣ್ಣಲ್ಲಿ ಗರ್ವವಿತ್ತು ಎಷ್ಟಾದರೂ ನಿಮ್ಮ ಶಿಷ್ಯನಲ್ಲವೇ ಎಂಬರ್ಥದಲ್ಲಿ...  ಆದರೆ ಶಿಷ್ಯನೆದುರು ಗುರು ಸೋಲಬಾರದಲ್ಲವೇ,  ಅವರು ಕಾವ್ಯಮಯ ಶೈಲಿಯಲ್ಲಿಯೇ ನನಗೆ ಕೊಟ್ಟ ಮರುತ್ತರ ಮತ್ತೂ  ಸಾರಸ್ಯವಾಗಿತ್ತು..... 

  ""ನನಗೂ ಏನಿಲ್ಲ 
ಅವಸರ. 
    ನಿನ್ನ ಬಗ್ಗೆ ಪ್ರೀತಿಯ 
ಕನಿಕರ.
     ಒಳಿತಾಗಲೆಂಬ  ಹಾರೈಕೆ 
ಒಂಥರ.
      ಮದುವೆಗೆ  ಬೇಕಾಗಿಲ್ಲ 
ಮುಜುಗರ. 
      ಸಿಗಲಿ  ನಿನಗೆ ಸಂಗಾತಿ 
ಸರಸರ "

ಕೊನೆಗೂ ಗುರುಗಳೆದುರು ನಾನು ಸೋಲಬೇಕಾಯಿತು.  ಎಷ್ಟಾದರೂ ನನ್ನ ಗುರುಗಳಲ್ಲವೇ. 🙏

(ಎಮ್. ಜೆ )

ಕಾಮೆಂಟ್‌ಗಳು

Popular Posts

ಬಾಳು ಮತ್ತು ಗೋಳು

ಸಾತ್ವಿಕ ಜೀವನದ ದಾರಿಯಲಿ ನಡೆಯಲಾರದೆ ಎಡವಿದವನು ಅಲೆಮಾರಿಯೋ...! ಹಣೆಬರಹವನು ಗೀಚಿಬಿಟ್ಟ ಭಗವಂತನು ಏನನ್ನೂ ಅರಿಯದ ಸೋಮಾರಿಯೋ....! ಜನಮ ನೀಡಿ ತಿದ್ದಿ ತೀಡಿ, ಸನ್ಮಾರ್ಗದಲಿ ನಡೆಯಲು ಪ್ರೇರೇಪಿಸಿದವರಿಗೆ ಅಭಾರಿಯೋ.!  ಮೌನವಾಗಿದ್ದು, ಜೀವಚ್ಛವದಂತಿರುವ, ಮುಗ್ದ ಮನಸ್ಸಿನ ಮೇಲೆ ದಬ್ಬಾಳಿಕೆಯ ಸವಾರಿಯೋ...! ಅಂಬೆಗಾಲಲಿ ಕಲಿತು, ದಾಪುಗಾಲಲಿ ನಡೆದು , ಕೋಲೂರಿ ನಡೆವ ತನಕ, ಬಾಳೆಂಬುದು ರಹದಾರಿಯೋ...!                                                        -ಮಿಥುನ್ ಜೈನ್

ಸರಳತೆ ಸೌಹಾರ್ದತೆ - ಮನುಜ ಕುಲಂ ತಾನೊಂದೆ ವಲಂ

ಮನುಜ ಕುಲಂ ತಾನೊಂದೆ ವಲಂ (ಸರಳ ಸೌಹಾರ್ದತೆ)  ಧರ್ಮಗಳೆಲ್ಲವು  ಒಳಿತನು ನೆನೆದರೆ ಜನಗಳ ಮದ್ಯೆ ದ್ವೇಷವೇಕೆ  !  ?  ಕರ್ಮ ಕಾಯಕವ ಮನವ ಬಯಸಿದರೆ ಪರರದು ಎಂಬ ಹಂಗೇಕೆ  ! ?  !ಪ! ಮಂದಿಯ ಮದ್ಯೆ ಮುನಿಸಿರದಿದ್ದರೆ  ಜಾತಿ ಜಾತಿ ನಡು ಬಿರುಕೇಕೆ  !  ?  ಒಂದಾಗಿದ್ದರೆ, ಎಲ್ಲಾ ಪಂಗಡಗಳು. ಏಕಿದೆ ನಡು ನಡು ಗೋಡೆಗಳು   ! ಪ! ಸಾರಿದರಲ್ಲವೇ  ಕವಿ ಕುವೆಂಪು. ವಿಶ್ವ ಮಾನವತೆಯ ಕಂಪು.  !  ಒಂದೇ,,ಜಾತಿ ಮತ, ದೇವರು ಎಂದರು.  ಗುರು ಶ್ರೀ ನಾರಾಯಣರು.   ! ಪ! ಇದ ಅರಿತರೆ ಬದುಕಿನ ಮಾರ್ಗ. ಬಾಳೊಂದು ನೆಮ್ಮದಿಯ ಸ್ವರ್ಗ. ! ಆದಿಕವಿ ಪಂಪನ ಕನ್ನಡ ಹೊನ್ನುಡಿ ಅಚಲ. ಮನುಜ ಕುಲ, ತಾನೊಂದೆ ವಲ  !ಪ!    ✍️ಎನ್. ಮಿಥುನ್ ಜೈನ್

ಅಮಾಯಕ ನೈಜ ಕಥೆ ( ಸಂಚಿಕೆ-೧೦)

 ಶಾಂತಿರಾಜನನ್ನು ಕಟ್ಟಿ ಹಾಕಿದ ಗೋಣಿ ಚೀಲವನ್ನು ಬಿಡಿಸಿ ನೋಡಿದಾಗ.. ಆ ದೃಶ್ಯ ನೋಡಿದ ಮನೆ ಮಂದಿಯೆಲ್ಲ ಒಮ್ಮೆಲೆ ಗಾಬರಿಗೊಂಡರು ಕೆಲವರು ಭಯದಿಂದ ಕಿರುಚಾಡಿದರು. ಶಾಂತಿರಾಜನ ದೇಹ ಮರುಗಟ್ಟಿ ಹೋಗಿತ್ತು. ಕೈ ಕಾಲುಗಳು ಜಡ್ಡುಗಟ್ಟಿ ಹೋಗಿತ್ತು.  ನರಕವೇದನೆಯನ್ನು ತಡೆಯಲಾರದೆ  ಅಲ್ಲಿಯೇ ಮಲ ಮೂತ್ರ ವಿಸರ್ಜನೆ ಆಗಿದೆ. ಯಾವುದೇ ಮಿಸುಕಾಟ ಇಲ್ಲ,   ಅವರಲ್ಲಿ ಯಾರೋ ಒಬ್ಬರು,  ಮೂಗಿನ ಬಳಿ ಕೈ ಹಿಡಿದರು, ಉಸಿರಾಡುತ್ತಿದ್ದಾನೆ.  ಮೂರ್ಛೆ ಹೋಗಿ ತುಂಬಾ ಹೊತ್ತಾಗಿದೆ. ಆದರೆ ಪ್ರಾಣ ಹೋಗಿಲ್ಲ.  ಮುಖಕ್ಕೆ ನೀರು ಚಿಮುಕಿಸಿದರು, ಆದರೆ ಪ್ರಜ್ಞೆ ಬರುತ್ತಿಲ್ಲ. ಹೀಗೆ ಕಮಲಕ್ಕ ನಡೆದ ಘಟನೆಯನ್ನು ವಿವರಿಸುತ್ತಿದ್ದಾರೆ,  ತನ್ನ ಕರುಳ ಕುಡಿಯ ಪ್ರಾಣ ವೇದನೆಯ ಕಥೆಯನ್ನು ಕಮಲಕ್ಕನ ಬಾಯಿಯಿಂದ ಕೇಳುತ್ತಿದ್ದಾಗ ಮರುದೇವಿಯವರು ಕೋಪ ಮತ್ತು ದುಃಖ್ಖದಿಂದ ಕುದಿಯುತ್ತಿದ್ದಾರೆ. ಕಮಲಕ್ಕ ಮತ್ತೆ ಆ ದುಃಖ್ಖದ ಕಥೆ ಯನ್ನು ಮುಂದುವರೆಸಿದರು. ಪುಂಡ ಯುವಕರ ಅಹಂಕಾರವೆಲ್ಲ ಇಳಿದುಹೋಗಿದೆ,  ಸಂಪೂರ್ಣ ಬೆವತು ಹೋಗಿದ್ದಾರೆ  ತಾವು ಮಾಡಿದ ಮಹಾ ಅಪರಾಧದ ಅರಿವಾಗಿ, ಬಹಳವಾಗಿ ನೊಂದು ಕೊಂಡರು. ಕೊನೆಗೆ ಯುವಕರೆಲ್ಲ ಒಂದು ನಿರ್ಧಾರಕ್ಕೆ ಬಂದರು. ಹೇಗಾದರು ಮಾಡಿ ಶಾಂತಿರಾಜನನ್ನು ಬದುಕಿಸ ಬೇಕು. ಕೂಡಲೇ,  ಯುವಕರೆಲ್ಲ ಸೇರಿ 'ಶಾಂತಿ'ಯನ್ನು ಭಾವಿ ಕಟ್ಟೆಯ ಬಳಿ ಕುಳ್ಳಿರಿಸಿ ತಲೆಗೆ ಕೊಡಪಾನದಿಂದ ನೀರ...