ಕಲಿಯುಗದ ಮಾಯಾವಿ ಶ್ರೀ ಕೃಷ್ಣನೇ... ಭಕ್ತರಾ ಪೊರೆವ ಭಗವಂತನೆ..... (೧) ನಿನ್ನ ಸಂದೇಶ ನೋಡುವೆವು ಗೀತೆಯಲಿ ! ಭಜಿಸುವೆವು ನಾವೆಲ್ಲ ನಿನ್ನನ್ನೆ ಭಕ್ತಿಯಲಿ ! ರಾದೆಯ ಮನದರಸ ಮಾದವನು ನೀನು ! ಹೆಂಗೆಳೆಯರೆಲ್ಲರ ಹೃದಯ ಚೋರನು ನೀನು ! ಕಲಿಯುಗದ ಮಾಯಾವಿ ಶ್ರೀ ಕೃಷ್ಣನೇ.... ಭಕ್ತರಾ ಪೊರೆವ ಭಗವಂತನೇ.....(೨) ಕಾಳಿಂಗ ಮರ್ದನದಿ ನೀಲ ವರ್ಣನು ನೀನು ! ಕುಚೇಲನ ಸ್ನೇಹದಲಿ ಶ್ವೇತ ವರ್ಣನು ನೀನು ! ಕಾಮಧೇನ ಕಾಯುವ ಗೋ ಪಾಲಕನು ನೀನು ! ನೊಂದವರ ಪಾಲಿಗೆ ಸಂಜೀವಿನಿ ನೀನು ! ಕಲಿಯುಗದ ಮಾಯಾವಿ ಶ್ರೀ ಕೃಷ್ಣನೇ.... ಭಕ್ತರಾ ಪೊರೆವ ಭಗವಂತನೇ.....(೩) ✍️ ಮಿಥುನ್ ಜೈನ್
#Ontinavika ಒಂಟಿ ನಾವಿಕ | #ಕನ್ನಡ • #ತುಳು ಸಾಹಿತ್ಯ #poems #stories #books #kannada #tulu