ಮನುಜ ಕುಲಂ ತಾನೊಂದೆ ವಲಂ (ಸರಳ ಸೌಹಾರ್ದತೆ) ಧರ್ಮಗಳೆಲ್ಲವು ಒಳಿತನು ನೆನೆದರೆ ಜನಗಳ ಮದ್ಯೆ ದ್ವೇಷವೇಕೆ ! ? ಕರ್ಮ ಕಾಯಕವ ಮನವ ಬಯಸಿದರೆ ಪರರದು ಎಂಬ ಹಂಗೇಕೆ ! ? !ಪ! ಮಂದಿಯ ಮದ್ಯೆ ಮುನಿಸಿರದಿದ್ದರೆ ಜಾತಿ ಜಾತಿ ನಡು ಬಿರುಕೇಕೆ ! ? ಒಂದಾಗಿದ್ದರೆ, ಎಲ್ಲಾ ಪಂಗಡಗಳು. ಏಕಿದೆ ನಡು ನಡು ಗೋಡೆಗಳು ! ಪ! ಸಾರಿದರಲ್ಲವೇ ಕವಿ ಕುವೆಂಪು. ವಿಶ್ವ ಮಾನವತೆಯ ಕಂಪು. ! ಒಂದೇ,,ಜಾತಿ ಮತ, ದೇವರು ಎಂದರು. ಗುರು ಶ್ರೀ ನಾರಾಯಣರು. ! ಪ! ಇದ ಅರಿತರೆ ಬದುಕಿನ ಮಾರ್ಗ. ಬಾಳೊಂದು ನೆಮ್ಮದಿಯ ಸ್ವರ್ಗ. ! ಆದಿಕವಿ ಪಂಪನ ಕನ್ನಡ ಹೊನ್ನುಡಿ ಅಚಲ. ಮನುಜ ಕುಲ, ತಾನೊಂದೆ ವಲ !ಪ! ✍️ಎನ್. ಮಿಥುನ್ ಜೈನ್
#Ontinavika ಒಂಟಿ ನಾವಿಕ | #ಕನ್ನಡ • #ತುಳು ಸಾಹಿತ್ಯ #poems #stories #books #kannada #tulu